
ಹುಬ್ಬಳ್ಳಿಯಲ್ಲಿ 150 ಕ್ಕೂ ಹೆಚ್ಚು ಮನೆ ಜಲಾವೃತ
ಹುಬ್ಬಳ್ಳಿಯಲ್ಲಿಯೂ ಮಳೆರಾಯ ಅಬ್ಬರಿಸುತ್ತಿದ್ದಾನೆ. ಗಣೇಶ ನಗರ, ಆನಂದ ನಗರದಲ್ಲಿ ನೀರೋ ನೀರು. 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಭಯದಿಂದ ಜನ ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಮನೆಯ ಸಾಮಾನು, ಸರಂಜಾಮುಗಳು ನೀರಲ್ಲಿ ಮುಳುಗಡೆಯಾಗಿವೆ.
ಬೆಂಗಳೂರು (ಅ. 21): ಹುಬ್ಬಳ್ಳಿಯಲ್ಲಿಯೂ ಮಳೆರಾಯ ಅಬ್ಬರಿಸುತ್ತಿದ್ದಾನೆ. ಗಣೇಶ ನಗರ, ಆನಂದ ನಗರದಲ್ಲಿ ನೀರೋ ನೀರು. 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಭಯದಿಂದ ಜನ ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಮನೆಯ ಸಾಮಾನು, ಸರಂಜಾಮುಗಳು ನೀರಲ್ಲಿ ಮುಳುಗಡೆಯಾಗಿವೆ. ಮನೆಯೊಳಗೂ ಇರಲಾಗದೇ, ಹೊರಗಡೆಯೂ ಇರಲಾಗದೇ ಜನ ಪರದಾಡುತ್ತಿದ್ದಾರೆ. ಮಹಾನಗರ ಪಾಲಿಕೆಯ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಇಷ್ಟೆಲ್ಲಾ ಅನಾಹುತಗಳಾಗಿವೆ.
Add Asianetnews Kannada as a Preferred Source
