Asianet Suvarna News Asianet Suvarna News

ಬೀದರ್‌ನಲ್ಲಿ ಭಾರೀ ಮಳೆ: ಅತಿವೃಷ್ಟಿಗೆ ರೈತ ಕಂಗಾಲು

*  ಬೀದರ್, ಹುಮನಾಬಾದ್, ಭಾಲ್ಕಿ, ಔರಾದ್‌ನಲ್ಲಿ ಭಾರೀ ಮಳೆ
*  ಬೆಳೆ ನೀರು ಪಾಲಾಗಿದ್ದು ದಿಕ್ಕು ತೋಚದಂತಾದ ರೈತರು 
*  ಮಳೆರಾಯನ ಅಬ್ಬರಕ್ಕೆ ಸಾಲಶೂಲ ಮಾಡಿ ಬೆಳೆಸಿದ್ದ ಬೆಳೆ ನಾಶ
 

ಬೀದರ್‌(ಸೆ.11): ಮಳೆರಾಯನ ಅಬ್ಬರಕ್ಕೆ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ 23,000 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ.   ಸೋಯಾ, ಉದ್ದು, ಹೆಸರು, ಕಬ್ಬು, ತೊಗರಿ ಬೆಳೆ ಈಗ ನೀರುಪಾಲಾಗಿದೆ. ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಮಳೆರಾಯನ ಅಬ್ಬರಕ್ಕೆ ಸಾಲಶೂಲ ಮಾಡಿ ಬೆಳೆಸಿದ್ದ ಬೆಳೆ ನಾಶವಾಗಿದೆ.

3 ವರ್ಷವಾದ್ರೂ ಪೂರ್ಣಗೊಳ್ಳದ ಇನ್ಫೋಸಿಸ್ ಮನೆಗಳು, ಮನೆಗಾಗಿ ಕಾಯುತ್ತಿದ್ದಾರೆ ಸಂತ್ರಸ್ತರು.! 

Video Top Stories