
ರಾಜ್ಯದೆಲ್ಲೆಡೆ ಮಳೆ: ಸ್ಮಾರ್ಟ್ ಸಿಟಿ ತುಮಕೂರಲ್ಲಿ ಕುಡಿಯುವ ನೀರಿಗೆ ಬರ..!
ರಾಜ್ಯದ ಹಲವು ಭಾಗಗಳಲ್ಲಿ ಜಲಪ್ರಳಯ ಆಗಿದೆ. ಎಲ್ಲಿ ನೋಡಿದ್ರೂ ನೀರು. ಆದರೆ, ಸ್ಮಾರ್ಟ್ಸಿಟಿ ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಬೆಂಗಳೂರು(ಜು.14): ರಾಜ್ಯಾದ್ಯಂತ ವರುಣ ಅಬ್ಬರಿಸುತ್ತಿದ್ದಾನೆ. ಆದರೆ, ಮತ್ತೊಂದೆಡೆ ಜೀವಜಲಕ್ಕೆ ಹಾಹಾಕಾರ ಉಂಟಾಗಿದೆ. ಹೌದು, ಒಂದೆಡೆ ಜಲಪ್ರಳಯ ಮತ್ತೊಂದೆಡೆ ಕುಡಿಯುವ ನೀರಿಗೆ ಬರ. ತುಮಕೂರು ನಗರ ಜಲಕ್ಷಾಮಕ್ಕೆ ಸಿಲುಕಿ ನರಳುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಜಲಪ್ರಳಯ ಆಗಿದೆ. ಎಲ್ಲಿ ನೋಡಿದ್ರೂ ನೀರು. ಆದರೆ, ಸ್ಮಾರ್ಟ್ಸಿಟಿ ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಲ ಜೀವನ್ ಮಿಷನ್ ಜಾರಿಯಾದ್ರೂ ಕೂಡ ನೀರಿನ ಕೊರತೆ ಮಾತ್ರ ನೀಗುತ್ತಿಲ್ಲ. ಸಮಸ್ಯೆ ಬಗೆ ಹರಿಸದೆ, ನೀರಿನ ಮಿತಬಳಕೆಗೆ ಪಾಲಿಕೆ ಕಟ್ಟಪ್ಪಣೆ ಹೊರಡಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ