Asianet Suvarna News Asianet Suvarna News

DCM ರದ್ದು: ರೇಣುಕಾಚಾರ್ಯಗೆ ಲಕ್ಷ್ಮಣ ಸವದಿ ಗುದ್ದು !

ಉಪಮುಖ್ಯಮಂತ್ರಿ ಹುದ್ದೆ ರದ್ದು ವಿಚಾರ| ಹಾದಿ ಬೀದಿಯಲ್ಲಿ ನಾನೂ ಚರ್ಚೆ ಮಾಡೋದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ| ರೇಣುಕಾಚಾರ್ಯಗೆ ತಿರುಗೇಟು ನೀಡಿದ ಸವದಿ| ರೇಣುಕಾಚಾರ್ಯ ಸಹಿ ಸಂಗ್ರಹ ಮಾಡುತ್ತಿರುವ ವಿಚಾರ ನನಗೆ ಗೊತ್ತಿಲ್ಲ| ಈ ಬಗ್ಗೆ ನಾನು ಮಾತಾಡಲ್ಲ|

ಬೆಂಗಳೂರು(ಜ.01): ಉಪಮುಖ್ಯಮಂತ್ರಿ ಹುದ್ದೆ ರದ್ದು ವಿಚಾರವನ್ನ ಹಾದಿ ಬೀದಿಯಲ್ಲಿ ನಾನೂ ಚರ್ಚೆ ಮಾಡೋದಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರಿಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ರೇಣುಕಾಚಾರ್ಯ ಅವರು ಸಹಿ ಸಂಗ್ರಹ ಮಾಡುತ್ತಿರುವ ವಿಚಾರ ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ಮಾತಾಡಲ್ಲ, ಕಾಲ ಕೂಡಿ ಬಂದಾಗ ವಿಧಾನ ಪರಿಷತ್ತಿಗೆ ಪ್ರವೇಶ ಆಗತ್ತದೆ ಎಂದು ಹೇಳಿದ್ದಾರೆ. 

ಡಿಸಿಎಂ ಸ್ಥಾನಕ್ಕೆ ಕತ್ತರಿ ಹಾಕಿ ಎಂದಿದ್ದ ಶಾಸಕ ರೇಣುಕಾಚಾರ್ಯ ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಡಿಸಿಎಂ ಕಿತ್ತಾಕಲು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.