ಪತ್ನಿ ಸಾವಿನ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ಪತಿ: ಸಾವಿನಲ್ಲೂ ಒಂದಾದ ದಂಪತಿ

ವಿಜಯಪುರ(ನ.23): ಸಾವಿನಲ್ಲೂ‌ ಒಂದಾದ ದಂಪತಿ ಘಟನೆ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಇಂದು(ಶನಿವಾರ) ನಡೆದಿದೆ. ಶುಕ್ರವಾರ ರಾತ್ರಿ ಪತ್ನಿ ಸಂಗನಬಸವ್ವ ಜಂಗಮಶೆಟ್ಟಿ ಎಂಬುವರು ಸಾವನ್ನಪ್ಪಿದ್ದರು. ಪತ್ನಿಯ ಸಾವಿನ ಸುದ್ದಿ ಕೇಳಿದ ಪತಿ ರೇವಣೆಪ್ಪ ಜಂಗಮಶೆಟ್ಟಿ ಅವರಿಗೆ ಪತ್ನಿ ಮೃತಪಟ್ಟಿರುವ ದುಃಖ ಭರಿಸುವ ಶಕ್ತಿ ಇರದೆ ಇಂದು ಬೆಳಗಿನ ಜಾವ ಅವರೂ ಕೂಡ ವಿಧಿವಶರಾಗಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ದಂಪತಿಯ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಮನೆಗೆ ಧಾವಿಸಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ವೃದ್ಧ ದಂಪತಿನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 
 

Share this Video
  • FB
  • Linkdin
  • Whatsapp

ವಿಜಯಪುರ(ನ.23): ಸಾವಿನಲ್ಲೂ‌ ಒಂದಾದ ದಂಪತಿ ಘಟನೆ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಇಂದು(ಶನಿವಾರ) ನಡೆದಿದೆ. ಶುಕ್ರವಾರ ರಾತ್ರಿ ಪತ್ನಿ ಸಂಗನಬಸವ್ವ ಜಂಗಮಶೆಟ್ಟಿ ಎಂಬುವರು ಸಾವನ್ನಪ್ಪಿದ್ದರು. ಪತ್ನಿಯ ಸಾವಿನ ಸುದ್ದಿ ಕೇಳಿದ ಪತಿ ರೇವಣೆಪ್ಪ ಜಂಗಮಶೆಟ್ಟಿ ಅವರಿಗೆ ಪತ್ನಿ ಮೃತಪಟ್ಟಿರುವ ದುಃಖ ಭರಿಸುವ ಶಕ್ತಿ ಇರದೆ ಇಂದು ಬೆಳಗಿನ ಜಾವ ಅವರೂ ಕೂಡ ವಿಧಿವಶರಾಗಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ದಂಪತಿಯ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಮನೆಗೆ ಧಾವಿಸಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ವೃದ್ಧ ದಂಪತಿನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 

Add Asianetnews Kannada as a Preferred SourcegooglePreferred

Related Video