Asianet Suvarna News Asianet Suvarna News

ವಿಜಯಪುರ: ತುಂಬಿ ಹರಿದ ಸೇತುವೆ ಮೇಲೆ ಬಸ್ ಚಲಾಯಿಸಿ, ಚಾಲಕನ ದುಸ್ಸಾಹಸ!

ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಪಾಯವನ್ನು ಕರೆಯುತ್ತಿವೆ. ಹೀಗಾಗಿ ನದಿ ಹಳ್ಳ ಕೊಳ್ಳ ದಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ತುಂಬಿ ಹರಿಯುತ್ತಿರುವ ಸೇತುವೆ ಮೇಲೆ, ಅಪಾಯ ಲೆಕ್ಕಿಸದೇ ಸರ್ಕಾರ ಬಸ್ ಚಾಲಕ ದುಸ್ಸಾಹಸ ಮಾಡಿದ್ದಾರೆ. 

ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಪಾಯವನ್ನು ಕರೆಯುತ್ತಿವೆ. ಹೀಗಾಗಿ ನದಿ ಹಳ್ಳ ಕೊಳ್ಳ ದಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ತುಂಬಿ ಹರಿಯುತ್ತಿರುವ ಸೇತುವೆ ಮೇಲೆ, ಅಪಾಯ ಲೆಕ್ಕಿಸದೇ ಸರ್ಕಾರ ಬಸ್ ಚಾಲಕ ದುಸ್ಸಾಹಸ ಮಾಡಿದ್ದಾರೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಹತ್ತಾರು ಪ್ರಯಾಣಿಕರ ಸಮೇತ ಜಲಾವೃತವಾದ ಸೇತುವೆ ಮೇಲೆ ಬಸ್ ಚಲಾಯಿಸಿ ಚೆಲ್ಲಾಟವಾಡಿದ್ದಾನೆ. ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡಿದ ಬಸ್ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪ್ರಯಾಣಿಕರು, ಸ್ಥಳೀಯರು ಆಗ್ರಹಿಸಿದ್ದಾರೆ. 

Video Top Stories