
ಟೋಯಿಂಗ್ಗೆ ಬ್ರೇಕ್ ಹಾಕಿದ ಸರ್ಕಾರ: ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿ ಮಂದಿ..!
* ಸರಳ ಮತ್ತು ನೂತನ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ
* ಪೊಲೀಸ್ ಇಲಾಖೆ ಜತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ
* 100 ಕೋಟಿ ವೆಚ್ಚದಲ್ಲಿ ಹೊಸ ಪಾರ್ಕಿಂಗ್ ಬೋರ್ಡ್ ಅಳವಡಿಕೆ
ಬೆಂಗಳೂರು(ಫೆ.03): ಟೋಯಿಂಗ್ನಿಂದ ಬೇಸತ್ತ ಸಿಲಿಕಾನ್ ಸಿಟಿ ಜನಕ್ಕೆ ಈಗ ಕೊಂಚ ನಿರಾಳವಾಗುವಂತ ಸಮಯ. ಹೌದು, ಸರಳ ಮತ್ತು ನೂತನ ನಿಯಮವನ್ನ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಪೊಲೀಸ್ ಇಲಾಖೆ ಜತೆ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು(ಗುರುವಾರ) ಸಭೆ ನಡೆಸಲಿದ್ದಾರೆ. ಟೋಯಿಂಗ್ ವಿಚಾರದಲ್ಲಿ ಸರಳೀಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಪಾರ್ಕಿಂಗ್ ಬೋರ್ಡ್ ಗಲಾಟೆಗೆ ಸಭೆಯಲ್ಲಿ ಸೂಕ್ತ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ನಗರದಲ್ಲಿ 100 ಕೋಟಿ ವೆಚ್ಚದಲ್ಲಿ ಹೊಸ ಪಾರ್ಕಿಂಗ್ ಬೋರ್ಡ್ ಅಳವಡಿಸಲು ನಿರ್ಧರಿಸಲಾಗಿದೆ.
Add Asianetnews Kannada as a Preferred Source

Karnataka Politics ಸಿದ್ದರಾಮಯ್ಯ ಕಾಂಗ್ರೆಸ್ ತ್ಯಜಿಸಿದ್ರೂ ಆಶ್ಚರ್ಯವಿಲ್ಲ, ರಾಜ್ಯ ರಾಜಕಾರಣಲ್ಲಿ ಹೊಸ ಬಾಂಬ್