
ಜನತಾ ಪವರ್: ಯಾವ ಬಂದ್ಗೂ ಕೇರ್ ಮಾಡದ ಬೆಂಗ್ಳೂರು ಇಂದು ಟೋಟಲ್ ಸೈಲೆಂಟ್
- ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಸ್ತಬ್ಧ
- ಬೆಂಗಳೂರಿನಲ್ಲಿ ಸ್ವಯಂಪ್ರೇರಿತ ಕಂಪ್ಲೀಟ್ ಬಂದ್
- ಬಣಗುಡುತ್ತಿರುವ ರಸ್ತೆಗಳು, ಸಾರ್ವಜನಿಕ ಸ್ಥಳಗಳು
ಬೆಂಗಳೂರು (ಮಾ.22): ಯಾವುದೇ ಬಂದ್ ಇರಲಿ, ಸಾಮಾನ್ಯವಾಗಿ ಬೆಂಗ್ಳೂರು ಜನ ಕೇರ್ ಮಾಡೋದು ಕಡಿಮೆ. ಬಂದ್ ಮಾಡಿಸೋರು ಚಾಪೆ ಕೆಳಗೆ ನುಸುಳಿದ್ರೆ, ಜನ ರಂಗೋಲಿ ಕೆಳಗೆ ನುಸುಳಿ ತಮ್ಮ ತಮ್ಮ ಕೆಲಸ ಮಾಡ್ಕೋತಾರೆ. ಕನಿಷ್ಠವೆಂದ್ರೆ, ಪ್ರತಿಭಟನಾಕಾರರಾದ್ರೂ ಅಲ್ಲಲ್ಲಿ ಕಾಣಸಿಗುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದರೆ ಇಂದಿನ ಜನತಾ ಕರ್ಫ್ಯೂಗೆ ಬೆಂಗ್ಳೂರು ಮಂದಿ ಸ್ವಯಂಪ್ರೇರಿತರಾಗಿ ಫುಲ್ ಬೆಂಬಲ ನೀಡಿದ್ದಾರೆ. ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಸ್ತಬ್ಧವಾಗಿದೆ. ರಸ್ತೆಗಳು, ಸಾರ್ವಜನಿಕ ಸ್ಥಳಗಳು ಬಣಗುಡುತ್ತಿವೆ. ಇಲ್ಲಿದೆ ಚಿತ್ರಣ...
ಯಾವಾಗಲೂ ಗಿಜಿಗಿಜಿಗುಡುವ ಮಾರ್ಕೆಟ್ ಹೀಗಿದೆ...
"
ಶಿವಾಜಿನಗರದ ರಸೆಲ್ ಮಾರ್ಕೆಟ್ ಚಿತ್ರಣ:
"