
ಬೆಳಗಾವಿ: ಆಹಾರ ಕಿಟ್ ಪಡೆಯಲು ಬಂದ ಮಹಿಳೆಯರಿಗೆ ಲಾಠಿ ಏಟು
ಅಹಾರ ಕಿಟ್ ಪಡೆಯಲು ಆಗಮಿಸಿದ ಸಾವಿರಾರು ಮಹಿಳೆಯರು| ಬೆಳಗಾವಿ ನಗರದ ಸಚಿವ ಸುರೇಶ ಅಂಗಡಿ ಅವರ ಕಚೇರಿ ಎದುರು ನಡೆದ ಘಟನೆ| ಮಹಿಳೆಯರನ್ನ ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ|
ಬೆಳಗಾವಿ(ಜೂ.05): ಅಹಾರ ಕಿಟ್ ಪಡೆಯಲು ಸಾವಿರಾರು ಮಹಿಳೆಯರು ಒಂದು ಕಡೆ ಸೇರಿ ಗದ್ದಲವಾದ ಘಟನೆ ನಗರದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಕಚೇರಿ ಎದುರು ನಡೆದಿದೆ. ಮಹಿಳೆಯರನ್ನ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಹಂತದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದು ಸೂಕ್ತವಲ್ಲ: ಶೆರಿಯಾರ್
ಲಾಕ್ಡೌನ್ ಸಂಬಂಧ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ದಿನಸಿ ಕಿಟ್ ನೀಡುತ್ತಿದ್ದರು. ಹೀಗಾಗಿ ಕಿಟ್ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಕೆಲ ಹೊತ್ತು ಕಾಲ್ತುಳಿತ ಅಗುತ್ತೆ ಎಂಬ ಅತಂಕ ಕೂಡ ನಿರ್ಮಾಣವಾಗಿತ್ತು.