ಬೆಳಗಾವಿ: ಆಹಾರ ಕಿಟ್ ಪಡೆಯಲು ಬಂದ ಮಹಿಳೆಯರಿಗೆ ಲಾಠಿ ಏಟು
ಅಹಾರ ಕಿಟ್ ಪಡೆಯಲು ಆಗಮಿಸಿದ ಸಾವಿರಾರು ಮಹಿಳೆಯರು| ಬೆಳಗಾವಿ ನಗರದ ಸಚಿವ ಸುರೇಶ ಅಂಗಡಿ ಅವರ ಕಚೇರಿ ಎದುರು ನಡೆದ ಘಟನೆ| ಮಹಿಳೆಯರನ್ನ ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ|
ಬೆಳಗಾವಿ(ಜೂ.05): ಅಹಾರ ಕಿಟ್ ಪಡೆಯಲು ಸಾವಿರಾರು ಮಹಿಳೆಯರು ಒಂದು ಕಡೆ ಸೇರಿ ಗದ್ದಲವಾದ ಘಟನೆ ನಗರದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಕಚೇರಿ ಎದುರು ನಡೆದಿದೆ. ಮಹಿಳೆಯರನ್ನ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ.
ಈ ಹಂತದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದು ಸೂಕ್ತವಲ್ಲ: ಶೆರಿಯಾರ್
ಲಾಕ್ಡೌನ್ ಸಂಬಂಧ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ದಿನಸಿ ಕಿಟ್ ನೀಡುತ್ತಿದ್ದರು. ಹೀಗಾಗಿ ಕಿಟ್ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಕೆಲ ಹೊತ್ತು ಕಾಲ್ತುಳಿತ ಅಗುತ್ತೆ ಎಂಬ ಅತಂಕ ಕೂಡ ನಿರ್ಮಾಣವಾಗಿತ್ತು.