Asianet Suvarna News Asianet Suvarna News

ಚಿಕ್ಕೋಡಿ ಆಯ್ತು ಬಾಗಲಕೋಟೆಯಲ್ಲೂ ಕ್ವಾರಂಟೈನ್‌ಗೆ ಕಿರಿಕ್‌..!

ಹೊರರಾಜ್ಯದಿಂದ ಬಂದವರಿಗೆ ಕ್ವಾರಂಟೈನ್‌ ಮಾಡಲು ಗ್ರಾಮಸ್ಥರ ವಿರೋಧ| ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿಯಲ್ಲಿ ನಡೆದ ಘಟನೆ| ಇಬ್ಬರು ಸ್ಥಳೀಯರು ಹಾಗೂ 12 ಬಿಹಾರಿಗಳನ್ನ ಗ್ರಾಮದ ಸರ್ಕಾರಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲು ಸಿದ್ಧತೆ| ಸ್ಥಳೀಯರು, ಅಧಿಕಾರಿಗಳ ಮಧ್ಯೆ ವಾಗ್ವಾದ|

ಬಾಗಲಕೋಟೆ(ಮೇ.13):  ಹೊರರಾಜ್ಯದಿಂದ ಬಂದವರನ್ನ ಕ್ವಾರಂಟೈನ್‌ ಮಾಡಲು ವಿರೋಧ ವ್ಯಕ್ತವಾದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಗ್ರಾಮದಲ್ಲಿ ನಡೆದಿದೆ. ಇಬ್ಬರು ಸ್ಥಳೀಯರು ಹಾಗೂ 12 ಬಿಹಾರಿಗಳನ್ನ ಗ್ರಾಮದ ಸರ್ಕಾರಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲು ಸಿದ್ಧತೆ ನಡೆದಿದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದೇ ಎರಡನೇ ಪ್ಯಾಕೇಜ್ ಘೋಷಿಸ್ತಾರಾ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ?

ಮಂಗಳೂರು ಭಾಗದಿಂದ ಬಂದಂತ ಕಾರ್ಮಿಕರು ಗ್ರಾಮದ ಸರ್ಕಾರಿ ಹಾಸ್ಟೆಲ್‌ನಲಲಿ ಕ್ವಾರಂಟೈನ್‌ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿರುವಾಗಲೇ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಥಳೀಯರು, ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿದೆ.