ಗಣರಾಜ್ಯೋತ್ಸವ ಪಥಸಂಚಲನ: ರಾಜ್ಯದಿಂದ ಅನುಭವ ಮಂಟಪ ಸ್ತಬ್ಧ ಚಿತ್ರ

ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಸಜ್ಜುಗೊಂಡ ನವದೆಹಲಿ| ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನ| ಈ ಬಾರಿಯ ರಾಜ್ಯವನ್ನ ಅನುಭವ ಮಂಟಪ ಮಾದರಿ ಸ್ತಬ್ಧ ಚಿತ್ರ ಪ್ರತಿನಿಧಿಸಲಿದೆ| ಸ್ತಬ್ಧ ಚಿತ್ರ ಸಾಗುವ ವೇಳೆ ಟ್ಯಾಬ್ಲೋದಲ್ಲಿ ವಚನಪಠಣ ನಡೆಯಲಿದೆ| 

Share this Video
  • FB
  • Linkdin
  • Whatsapp

ಬೀದರ್‌(ಜ.23): ಗಣರಾಜ್ಯೋತ್ಸವದ ಪಥಸಂಚಲನಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಈ ಬಾರಿಯ ರಾಜ್ಯವನ್ನ ಅನುಭವ ಮಂಟಪ ಮಾದರಿ ಸ್ತಬ್ಧ ಚಿತ್ರ ಪ್ರತಿನಿಧಿಸಲಿದೆ. ಅಲ್ಲಮಪ್ರಭು, ಅಕ್ಕಮಹಾದೇವಿಯವರ ನಡುವೆ ನಡೆದ ಚರ್ಚೆಯ ಪ್ರತಿರೂಪವನ್ನು ಇದು ಒಳಗೊಂಡಿದೆ. 

Add Asianetnews Kannada as a Preferred SourcegooglePreferred

ಅನುಭವ ಮಂಪಟದ ಜೊತೆಗೆ ರಾಜ್ಯದ ಜನಪದಗಳಾದ ವೀರಗಾಸೆ, ಸುಡಗಾಡು ಸಿದ್ಧ, ಕಂಸಾಳೆ, ಮೈಲಾರಲಿಂಗ ಸೇರಿದಂತೆ ಹಲವು ಸ್ತಬ್ಧ ಚಿತ್ರಗಳು ಇರಲಿವೆ. ಸ್ತಬ್ಧ ಚಿತ್ರ ಸಾಗುವ ವೇಳೆ ಟ್ಯಾಬ್ಲೋದಲ್ಲಿ ವಚನಪಠಣ ನಡೆಯಲಿರುವುದು ಮತ್ತೊಂದು ವಿಶೇಷವಾಗಿದೆ.

Related Video