
Coronavirus Lockdown: ಲಾಕ್ ಡೌನ್ ತಪ್ಪಿಸಲು ಇದೊಂದೇ ಸೂತ್ರ ಎಂದ ಬೊಮ್ಮಾಯಿ
* ಕಳೆದ ಒಂದು ವಾರದಿಂದ ಏರಿಕೆ ಹಾದಿಯಲ್ಲಿ ಕೊರೋನಾ
* ರಾಜ್ಯದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್
* ಕರ್ನಾಟಕದ ಆರೋಗ್ಯ ಕಾಪಾಡಲು ಸರ್ಕಾರ ಬದ್ಧ
* ಜನ ಸಹಕಾರ ಕೊಟ್ಟರೆ ಲಾಕ್ ಡೌನ್ ಮಾತೇ ಇಲ್ಲ
ಬೆಳಗಾವಿ(ಜ. 02) ಜನ ಸಹಕಾರ ಕೊಟ್ರೆ ಲಾಕ್ ಡೌನ್ (Lockdown) ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaj Bommai) ಳಗಾವಿಯಲ್ಲಿ ರಿಯಾಕ್ಷನ್ ಕೊಟ್ಟಿದ್ದಾರೆ. ಕೊರೋನಾ (Coronavirus) ಏರಿಕೆಯಾಗುತ್ತಿದೆ. ರೂಪಾಂತರಿ (omicron)ಸಂಕಷ್ಟ ತಂದಿಡುವ ಆತಂಕ ಸೃಷ್ಟಿಸಿದೆ.
Add Asianetnews Kannada as a Preferred Source

ಕೊರೋನಾ ಲಾಕ್ ಡೌನ್.. ಅಂಕಿ ಅಂಶಗಳು ಏನು ಹೇಳುತ್ತವೆ?
ತಾಂತ್ರಿಕ ಸಲಹಾ ಸಮಿತಿ ಸಹ ಕೊರೋನಾ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ಸರ್ಕಾರಕ್ಕೆ (Karnataka Govt)ನೀಡಿದೆ. ಒಂದು ವಾರದಿಂದ ಕೊರೋನಾ ಏರಿಕೆಯಾಗುತ್ತಿದ್ಗದು ಜನರು ಸರಿಯಾದ ರೀತಿಯಲ್ಲಿ ಸಹಕಾರ ನೀಡಿ ಕೊರೋನಾ ನಿಯಮಗಳನ್ನು ಪಾಲಿಸಿದರೆ ಲಾಕ್ ಡೌನ್ ಮಾತೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.