
ಒನ್ ಇಂಡಿಯಾ ಒನ್ ಎಲೆಕ್ಷನ್ಗೆ ಮುಂದಾಯ್ತಾ ಕೇಂದ್ರ ಸರ್ಕಾರ? ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ!
ಪಶ್ಚಿಮ ಬಂಗಾಳ ಸಿಎಂ ಅವಧಿ ಪೂರ್ವ ಚುನಾವಣೆ ನಡೆಯುವ ಸುಳಿವು ನೀಡಿದ್ದು, ವಿಪಕ್ಷಗಳಿಗೆ ಹೆಲಿಕಾಪ್ಟರ್ ಸಿಗದಂತೆ ಪ್ಲ್ಯಾನ್ ನಡೀತಿದೆ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆ ಅವಧಿಗೆ ಮುನ್ನವೇ ನಡೆಯುತ್ತಾ ಎಂಬ ಮಾತು ಆಗಾಗ್ಗೆ ಕೇಳಿಬರುತ್ತಿದೆ. ಪಂಚ ರಾಜ್ಯಗಳ ಚುನಾವಣೆ ಜತೆಗೆ ಲೋಕಸಭಾ ಎಲೆಕ್ಷನ್ ನಡೆಯಲಿದ್ಯಾ ಎಂಬ ಮಾತುಗಳು ಈಗ ಮತ್ತೆ ಕೇಳಿಬರುತ್ತಿದೆ. ಪಶ್ಚಿಮ ಬಂಗಾಳ ಸಿಎಂ ಅವಧಿ ಪೂರ್ವ ಚುನಾವಣೆ ನಡೆಯುವ ಸುಳಿವು ನೀಡಿದ್ದಾರೆ. ಹಾಗೂ, ವಿಪಕ್ಷಗಳಿಗೆ ಹೆಲಿಕಾಪ್ಟರ್ ಸಿಗದಂತೆ ಪ್ಲ್ಯಾನ್ ನಡೀತಿದೆ ಎಂದೂ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ. ಒಟ್ಟಾರೆ, ಅಟಲ್ ಹಾದಿಯಲ್ಲೇ ಪ್ರಧಾನಿ ಮೋದಿ ಹಾದಿ ಹಿಡಿಯಲಿದ್ದಾರಾ ಎಂಬ ಮಾತೂ ಕೇಳಿಬರ್ತಿದೆ.
Add Asianetnews Kannada as a Preferred Source
