Asianet Suvarna News Asianet Suvarna News

UP Elections 2022: ಹಿಂದುಳಿದ ಜಾತಿಗಳು ಮತ್ತು ದಲಿತರ ಮತ ಸೆಳೆಯಲು ಪ್ರಿಯಾಂಕ ತಂತ್ರ?

ಉತ್ತರ ಪ್ರದೇಶ ಚುನಾವಣೆಯ ಇನ್ನೊಂದು ಹಂತದ ಮತದಾನ ಬಾಕಿಯಿದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಉತ್ತರ ಪ್ರದೇಶದಲ್ಲೇ ಬೀಡುಬಿಟ್ಟಿದ್ದಾರೆ. ಮತದಾರರನ್ನು ಸೆಳೆಯಲು ಕೊನೆಕ್ಷಣದ ಎಲ್ಲಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
 

ಉತ್ತರ ಪ್ರದೇಶ ಚುನಾವಣೆಯ ಇನ್ನೊಂದು ಹಂತದ ಮತದಾನ ಬಾಕಿಯಿದೆ.  ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಉತ್ತರ ಪ್ರದೇಶದಲ್ಲೇ ಬೀಡುಬಿಟ್ಟಿದ್ದಾರೆ. ಮತದಾರರನ್ನು ಸೆಳೆಯಲು ಕೊನೆಕ್ಷಣದ ಎಲ್ಲಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಸಂತ ಕಬೀರದಾಸರ ಮಠಕ್ಕೆ ಭೇಟಿ ನೀಡಿದ್ದಾರೆ. ಮಹಂತ್ ವಿವೇಕದಾಸ್ ಅವರೊಂದಿಗೆ ಮಠಕ್ಕೆ ತೆರಳಿದ ಪ್ರಿಯಾಂಕಾ ಗಾಂಧಿ ಇಲ್ಲಿನ ಸಂಪೂರ್ಣ ಇತಿಹಾಸವನ್ನು ತಿಳಿದುಕೊಂಡರು. 

ಇಲ್ಲಿನ ಬಗ್ಗೆ ಪ್ರಿಯಾಕಾ ಗಾಂಧಿಗೆ ಮಾಹಿತಿ ನೀಡಿದ ಮಹಂತ್ ವಿವೇಕದಾಸ್ ಕಬೀರಪಂಥಿಗಳಿಗೆ ಮತ್ತು ದೇಶಾದ್ಯಂತ ಕಬೀರದಾಸ್‌ರನ್ನು ಮೇಲೆ ನಂಬಿಕೆ ಇರಿಸುವ ಭಕ್ತರಿಗೆ ಕಬೀರಚೌರ ಮಠವು ಒಂದು ಪವಿತ್ರ ಸ್ಥಳವಾಗಿದೆ ಎಂದಿದ್ದಾರೆ. 1934ರಲ್ಲಿ ಮಹಾತ್ಮ ಗಾಂಧಿ ಕೂಡ ಈ ಮಠಕ್ಕೆ ಭೇಟಿ ನೀಡಿದ್ದರು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕೂಡ ಇಲ್ಲಿಗೆ ಹಲವು ಬಾರಿ ಬಂದಿದ್ದಾರೆ. ರಾಷ್ಟ್ರಕವಿ ರವೀಂದ್ರನಾಥ ಠಾಗೋರ್ ಕೂಡ ಇಲ್ಲಿಯೇ ಇರುತ್ತಿದ್ದರು ಎಂದು ತಿಳಿಸಿದರು.

UP Elections 2022: ವಾರಣಾಸಿಯಲ್ಲಿ 2 ದಿನ ಪ್ರಧಾನಿ ಮೋದಿ ಪ್ರಚಾರ, ರೋಡ್‌ ಶೋ

1934ರಲ್ಲಿ ಗಾಂಧೀಜಿ ಜನರನ್ನುದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲಿರುವ ಮರವನ್ನೂ ಮಹಂತ್ ವಿವೇಕದಾಸ್ ಅವರು ಪ್ರಿಯಾಂಕಾ ಗಾಂಧಿಗೆ ತೋರಿಸಿದರು. ಇದಾದ ಬಳಿಕ ಪ್ರಿಯಾಂಕಾ ಮಠದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಬಳಿಕದ ನಂತರ ಪ್ರಿಯಾಂಕಾ ದೇವಸ್ಥಾನದ ಪ್ರಾಂಗಣದಲ್ಲಿಯೇ ಕೆಲಕಾಲ ಕುಳಿತು ಅಲ್ಲಿದ್ದವರೊಂದಿಗೆ ಭಜನೆ ಆಲಿಸಿದರು.

ಸಂತ ಕಬೀರದಾಸರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂದೇಶದಿಂದ ಉತ್ತರ ಪ್ರದೇಶದ ದಲಿತ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಬಹಳಷ್ಟು ಪ್ರಭಾವಿತರಾಗಿದ್ದಾರೆ. ಸಂತ ಕಬೀರದಾಸ್‌ಗೆ ಸಾಕಷ್ಟು ಸಾಂಸ್ಕೃತಿಕ ಮಹತ್ವವಿದೆ.  ಇನ್ನು ಏಳನೇ ಹಂತದ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳು ಮತ್ತು ದಲಿತರ ಸಂಖ್ಯೆ ಗಣನೀಯವಾಗಿದೆ. ಈ ವರ್ಗದ ಮತದಾರರನ್ನು ಪ್ರಿಯಾಂಕಾ ತನ್ನ ಕಡೆಗೆ ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಕಬೀರಮಠಕ್ಕೆ ಭೇಟಿ ನೀಡುವ ಮೂಲಕ ಪ್ರಿಯಾಂಕಾ ದೊಡ್ಡ ಸಂದೇಶ ನೀಡಿದ್ದಾರೆ.

Video Top Stories