ದೇಶ ಕಟ್ಟಿದ ಮಹಾ ದಿಗ್ಗಜ, ದೇಶ ಮರೆಯದ ಮಾಣಿಕ್ಯ: ಪಿವಿಎನ್ @100!
ಇದು ಜಗತ್ತೇ ಎದುರು ನಿಂತಾಗ ಎದೆಯೊಡ್ಡ ನಿಂತ ಛಲದಂಕಮಲ್ಲನ ಕಥೆ. ಪ್ರವಾಹದ ವಿರುದ್ಧ ಈಜಿ ಸೈ ಎನಿಸಿಕೊಂಡವರ ಯಶೋಗಾಥೆ. ಭಾರತದ ಭಾಗ್ಯವನ್ನೇ ಬದಲಾಯಿಸಿದ ಭಾರತ ಭಾಗ್ಯವಿದಾತನ ರೋಚಕ ಕತೆ.
ನವದೆಹಲಿ(ಜೂ.29): ಇದು ಜಗತ್ತೇ ಎದುರು ನಿಂತಾಗ ಎದೆಯೊಡ್ಡ ನಿಂತ ಛಲದಂಕಮಲ್ಲನ ಕಥೆ. ಪ್ರವಾಹದ ವಿರುದ್ಧ ಈಜಿ ಸೈ ಎನಿಸಿಕೊಂಡವರ ಯಶೋಗಾಥೆ. ಭಾರತದ ಭಾಗ್ಯವನ್ನೇ ಬದಲಾಯಿಸಿದ ಭಾರತ ಭಾಗ್ಯವಿದಾತನ ರೋಚಕ ಕತೆ.
ಹೌದು ಇದು ಆ ಛಲದಂಕಮಲ್ಲನ ಜನ್ಮ ಶತಮಾನೋತ್ಸವದ ದಿನ. ನವಭಾರತದ ಶಿಲ್ಪಿ ಎಂದೇ ಕರೆಸಿಕೊಮಡ ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರ ಅಮೋಶ ಸಾಧನೆಗಳ ಅನಾವರಣ.