Asianet Suvarna News Asianet Suvarna News

Hijab Row: ಮಧ್ಯ ಪ್ರವೇಶಿಸಲು ನಕಾರ, ಕರ್ನಾಟಕ ಹೈಕೋರ್ಟ್ ಮೊದಲು ವಿಚಾರಣೆ ನಡೆಸಲಿ: ಸುಪ್ರೀಂ

ಹಿಜಾಬ್-ಕೇಸರಿ (Hijab- Saffron Row) ಸಂಘರ್ಷ ಮತ್ತಷ್ಟು ಜಟಿಲಗೊಂಡಿದೆ. ಸುಪ್ರೀಂಕೋರ್ಟ್ (Supreme Court) ಮೊರೆ ಹೋದ ಹಿರಿಯ ವಕೀಲ ಕಪಿಲ್ ಸಿಬಲ್. ಈ ವಾದ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕು, ತುರ್ತು ವಿಚಾರಣೆ ಕೈಗೆತ್ತಿಕೊಳ್ಳಿ ಎಂದು ಕಪಿಲ್ ಸಿಬಲ್ ಸಿಜೆಐಗೆ ಮನವಿ ಸಲ್ಲಿಸಿದ್ದರು. ಆದರೆ ಹಿಜಾಬ್ ವಿವಾದದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ ವ್ಯಕ್ತಪಡಿಸಿದೆ. 

First Published Feb 10, 2022, 2:39 PM IST | Last Updated Feb 10, 2022, 2:39 PM IST

ಬೆಂಗಳೂರು (ಫೆ. 10): ಹಿಜಾಬ್-ಕೇಸರಿ (Hijab- Saffron Row) ಸಂಘರ್ಷ ಮತ್ತಷ್ಟು ಜಟಿಲಗೊಂಡಿದೆ. ಸುಪ್ರೀಂಕೋರ್ಟ್ (Supreme Court) ಮೊರೆ ಹೋದ ಹಿರಿಯ ವಕೀಲ ಕಪಿಲ್ ಸಿಬಲ್. ಈ ವಾದ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕು, ತುರ್ತು ವಿಚಾರಣೆ ಕೈಗೆತ್ತಿಕೊಳ್ಳಿ ಎಂದು ಕಪಿಲ್ ಸಿಬಲ್ ಸಿಜೆಐಗೆ ಮನವಿ ಸಲ್ಲಿಸಿದ್ದರು. ಆದರೆ ಹಿಜಾಬ್ ವಿವಾದದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ ವ್ಯಕ್ತಪಡಿಸಿದೆ. ಕರ್ನಾಟಕ ಹೈಕೋರ್ಟ್ ಮೊದಲು ವಿಚಾರಣೆ ನಡೆಸಲಿ. ಸುಪ್ರೀಂಕೋರ್ಟ್‌ಗೆ ಈಗಲೇ ವರ್ಗಾವಣೆಯಾಗೋದು ಬೇಡ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.