
ಭಾರತ ಮಂಟಪ ಲೋಕಾರ್ಪಣೆಗೊಳಿಸಿದ ಮೋದಿ: ಶೃಂಗೇರಿ ಮಠ ಪುರೋಹಿತರ ನೇತೃತ್ವದಲ್ಲಿ ಪೂಜೆ
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಪ್ರಗತಿ ಮೈದಾನದಲ್ಲಿ ನಿರ್ಮಾಣವಾಗಿರುವ ಭಾರತ ಮಂಟಪವನ್ನು ಲೋಕಾರ್ಪಣೆಗೊಳಿಸಿದರು.
ನವದೆಹಲಿ: ಪ್ರಗತಿ ಮೈದಾನದಲ್ಲಿ ಅತ್ಯದ್ಭುತ ವಿನ್ಯಾಸಗಳೊಂದಿಗೆ ನಿರ್ಮಾಣಗೊಂಡಿರುವ ಸುಧಾರಿತ ಸಮುಚ್ಚಯ ಐಇಸಿಸಿಯನ್ನು ಪ್ರಧಾನಿ ನರೇಂದ್ರ ಮೋದಿ(PM Modi) ಉದ್ಘಾಟಿಸಿದರು.ಇದಕ್ಕೆ ಭಾರತ ಮಂಟಪ(Bharat Mandapam) ಎಂದು ಹೆಸರನ್ನು ಇಡಲಾಗಿದೆ. ಈ ಸಮುಚ್ಚಯವು ಸುಮಾರು 123 ಎಕರೆ ಭೂಪ್ರದೇಶದಲ್ಲಿದೆ. ಇದು ಸ್ಥಳೀಯ ಹಾಗೂ ಜಾಗತಿಕ ಸಭೆ, ಸಮ್ಮೇಳನ ಹಾಗೂ ಪ್ರದರ್ಶನಗಳ ತಾಣವಾಗಿರಲಿದೆ. ಮಂದಿನ ಜಿ 20 ಸಮ್ಮೇಳನ(G20 conference) ಇಲ್ಲಿಯೇ ನಡೆಯಲಿದೆ. ಪೂಜೆ-ಹೋಮ ಹವನವನ್ನ ಇಲ್ಲಿ ಮಾಡಲಾಗಿದ್ದು, ಕರ್ನಾಟಕದ ಶೃಂಗೇರಿ ಮಠದ(Sringeri Math) ಪುರೋಹಿತರ ನೇತೃತ್ವದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ವಿಶ್ವದರ್ಜೆಯ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರವಾಗಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು, ಸಂಸದರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಏಸ್ ವಾಹನ ಚಾಲಕನ ಎಡವಟ್ಟು: ಬೈಕ್ ಸವಾರನ ದುರ್ಮರಣ