ಗರೀಬಿ ಹಠಾವೋ ಘೋಷಣೆ ಕೇಳಿದ್ದೆವು, ಇದೀಗ 25 ಕೋಟಿ ಬಡನತದಿಂದ ಮುಕ್ತ, ಕಾಂಗ್ರೆಸ್ ತಿವಿದ ಮೋದಿ

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಿಸಿದ್ದಾರೆ. ಖಡಕ್ ತಿರುಗೇಟು ನೀಡಿದ್ದಾರೆ. ಮೋದಿ ಪ್ರಸ್ತಾಪಿಸಿದ ವಿಚಾರಗಳೇನು?

Chethan Kumar  | Published: Feb 4, 2025, 11:20 PM IST

ನವದೆಹಲಿ(ಫೆ.04) ಐದೈದು ದಶಕಗಳಿಂದ ಗರೀಬಿ  ಹಠಾವೋ ಘೋಷಣೆ ಕೇಳಿದ್ದೆವು. ಆದರೆ ಬಡವರು ಬಡವರಾಗಿಯೇ ಉಳಿದಿದ್ದರು. ಇದೀಗ 25 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡುತ್ತಾ, ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದಾರೆ.ದೇಶದ ಜನರು ನಮಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಯೋಜನಾ ಬದ್ಧವಾಗಿ, ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ ಎಂದಿದ್ದಾರೆ.