
ಕೇಂದ್ರದ 'ಕೈ' ಬಲಕ್ಕೆ ಸಿದ್ದು ಬದಲಾಗಿ ಪಟ್ಟದ ಶಿಷ್ಯ, ಏನಾಗಲಿದೆ ಆರ್ಯನ್ ಭವಿಷ್ಯ?
* ಉಪಚುನಾವಣಾ ಕಣದ ಅಭ್ಯರ್ಥಿಗಳು ಫೈನಲ್* ರಾಷ್ಟ್ರದ ರಾಜಕಾರಣಕ್ಕೆ ಹೊರಟ ಸಿದ್ದು ಆಪ್ತ!* ಸಿದ್ದರಾಮಯ್ಯ ಸೋನಿಯಾ ಗಾಂಧಿ ಭೇಟಿ
* ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಮತ್ತಷ್ಟು ಬೆಳವಣಿಗೆ
ಬೆಂಗಳೂರು(ಅ. 05) ಹಾನಗಲ್ (Hangal) ಮತ್ತು ಸಿಂಧಗಿ(Sindhagi) ಉಪಚುನಾವಣೆಗೆ (By poll) ಎಲ್ಲ ಪಕ್ಷಗಳು ಸಿದ್ಧತೆ ಪೂರ್ಣಗೊಳಿಸಿದ್ದು ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಅಭ್ಯರ್ಥಿಗಳ ಫೈನಲ್ ಮಾಡಿವೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ದೆಹಲಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಅವರನ್ನು ಭೇಟಿ ಮಾಡಿದ್ದಾರೆ. ತಮಗೆ ರಾಜ್ಯ ರಾಜಕಾರಣವೇ ಉತ್ತಮ, ರಾಷ್ಟ್ರ ರಾಜಕಾರಣದ ಕಡೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸದ್ದಿಲ್ಲದೆ ಆಪರೇಶನ್ ಹಸ್ತ ನಡೆಯುತ್ತಿದೆಯೆ?
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಡ್ರಗ್ಸ್ ಕೇಸ್ನಲ್ಲಿ ಉದ್ಯಮಿಗಳ ಮಕ್ಕಳು, ಟೆಕ್ಕಿಗಳ ಮೇಲೆ ಎನ್ಸಿಬಿ ಕಣ್ಣಿಟ್ಟಿದೆ. ಲಖೀಮ್ಪುರ ಖೇರಿಯ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಿದವರು ಅರೆಸ್ಟ್...ಕೇಂದ್ರ ಮಂತ್ರಿ ಅಜಯ್ ಮಿಶ್ರಾ ಮಗನ ಬಂಧನ ಯಾಕಿಲ್ಲ... ? ಯೋಗಿ ರಾಜ್ಯದಲ್ಲಿ ಕಾನೂನಿಗೆ ಬೆಲೆಯೇ ಇಲ್ವಾ? ಎನ್ನುವ ಮಾತು ಕೇಳಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ....