Asianet Suvarna News Asianet Suvarna News

News Hour: ತಮಿಳುನಾಡು ವಿರುದ್ಧ ನಾಯಕರ ಕೆಂಡ, ಮೇಕೆದಾಟು ಯೋಜನೆ ನಮ್ಮದು!

* ಕಾಲು ಕೆರೆದು ಬರುತ್ತಿರುವ ತಮಿಳುನಾಡನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ
*ತಮಿಳುನಾಡು ಕ್ಯಾತೆಗೆ ಎಚ್‌ಡಿಕೆ ಕೊಟ್ಟ ಉತ್ತರ
* ಪಂಚ ರಾಜ್ಯ ಫಲಿತಾಂಶದ ನಂತರ ಮತ್ತೆ ಪೆಟ್ರೋಲ್  ದರ ಏರಿಕೆ
*ಮಂಗಳೂರಿನಲ್ಲಿ ಹಿಜಾಬ್ VS ಹಿಂದು

ಬೆಂಗಳೂರು(ಮಾ. 22)  ಕರ್ನಾಟಕದ (Karnataka) ಮೇಕೆದಾಟು (Mekedatu) ಯೋಜನೆ ವಿರೋಧಿಸಿ ತಮಿಳುನಾಡು (Tamilnadu) ಅಲ್ಲಿನ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಂಡಿದ್ದನ್ನು ಇಲ್ಲಿಯ ನಾಯಕರು (Karnataka Leaders) ತೀವ್ರವಾಗಿ ವಿರೋಧಿಸಿದ್ದಾರೆ. ಎಲ್ಲ ಪಕ್ಷಗಳು ಒಟ್ಟಾಗಿ ಹೋರಾಟ ಮಾಡೋಣ ಎಂದು  ಸಿಎಂ ಬೊಮ್ಮಾಯಿ ಕರೆ ಕೊಟ್ಟಿದ್ದಾರೆ. . ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಸಲಹೆ ನೀಡಿದ್ದಾರೆ.

ಹೈಕೋರ್ಟ್ (High Court) ಹಿಜಾಬ್ ಗೆ ಸಂಬಂಧಿಸಿ ನೀಡಿದ್ದ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಬಂದ್ ಮಾಡಿದ್ದವು. ಈಗ ಹಿಂದು ಸಂಘಟನೆಗಳಿಂದ ಅದಕ್ಕೆ ಪ್ರತಿಕ್ರಿಯೆ ಸಿಗುತ್ತಿದೆ. ನಾಲ್ಕುವರೆ ತಿಂಗಳ ನಂತರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಿದೆ. ಈ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿಯೂ ಚರ್ಚೆಯಾಗಿದೆ.

 

 

 

 

Video Top Stories