ಅಮರನಾಥದಲ್ಲಿ ಮೇಘ ಸ್ಫೋಟ: ಹಿಮಲಿಂಗ ದರ್ಶನಕ್ಕೆ ಹೋದವರು ಜಲಸಮಾಧಿ!
- ದಕ್ಷಿಣ ಕಾಶ್ಮೀರದಲ್ಲಿ ಭಾರಿ ಮಳೆ, ಪ್ರವಾಹ ಸೃಷ್ಟಿ
- ಕೊಚ್ಚಿದ ಹೋದ ಅಮರನಾಥ ಭಕ್ತರು
- ಅಮರನಾಥ ಯಾತ್ರೆ ಸ್ಥಗಿತಗೊಳಿಸಿದ ಸರ್ಕಾರ
ಕಾಶ್ಮೀರ(ಜು.10): ಪವಿತ್ರ ಅಮರನಾಥ ಯಾತ್ರೆಯಲ್ಲಿ ನಡೆದ ಮೇಘಸ್ಫೋಟ ದುರಂತಕ್ಕೆ 16 ಮಂದಿ ನಿಧನರಾಗಿದ್ದರೆ, 40ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಬೇಸ್ ಕ್ಯಾಂಪ್ ಬಳಿ ಪ್ರವಾಹ ಉಕ್ಕಿ ಬಂದ ಕಾರಣ ಭಕ್ತರು ಕೊಚ್ಚಿ ಹೋಗಿದ್ದಾರೆ. ಹೀಗಾಗಿ 43 ದಿನದ ಅಮರನಾಥ ಯಾತ್ರೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ.