JNU ಹಿಂಸಾಚಾರದ ಹಿಂದೆ ABVP ಕೈವಾಡ? ಶುರುವಾಯ್ತು ರಾಜಕೀಯ ಆಟ
- ಜೆಎನ್ಯು ಕ್ಯಾಂಪಸ್ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ
- ಮಾರಾಕಾಸ್ತ್ರಗಳೊಂದಿಗೆ ವಿವಿ ಕ್ಯಾಂಪಸ್ಗೆ ನುಗ್ಗಿದ್ದ ಮುಸುಕುಧಾರಿಗಳ ಗುಂಪು
- ಘಟನೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ; ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು
ನವದೆಹಲಿ (ಜ.06): ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಜೆ ಏಕಾಏಕಿ ಭಾರೀ ಹಿಂಸಾಚಾರ ಸಂಭವಿಸಿದ್ದು, ಹತ್ತಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಮಾರು 50 ಮಂದಿ ಮುಸುಕುಧಾರಿಗಳಿದ್ದ ಗುಂಪೊಂದು ಮಾರಾಕಾಸ್ತ್ರಗಳೊಂದಿಗೆ ವಿವಿ ಕ್ಯಾಂಪಸ್ನೊಳಗೆ ನುಗ್ಗಿ ದಾಂಧಲೆ ಎಬ್ಬಿಸಿದೆ. ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ಆರೋಪ- ಪ್ರತ್ಯಾರೋಪಗಳು ಶುರುವಾಗಿವೆ.
ಇದನ್ನೂ ನೋಡಿ | ಮೋದಿ, ಶಾ ಕೂಡ ಜೈಲಿಗೆ ಹೋಗ್ತಾರೆ ಎಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ...
ಹಿಂಸಾಚಾರದ ಹಿಂದೆ ಎಬಿವಿಪಿ ಕೈವಾಡ ಇದೆ ಎಂದು ಎಡಪಂಥೀಯ ಸಂಘಟನೆಗಳು ಆರೋಪಿಸಿವೆ.