
Cyclone Effect : 10 ವರ್ಷಗಳಲ್ಲಿ 40 ಚಂಡಮಾರುತ, 800 ಕ್ಕೂ ಹೆಚ್ಚು ಸಾವು
ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಎಲ್ಲೆಡೆ ಅಪಾರ ಬೆಳೆ ನಷ್ಟ, ಜನ ಜೀವನ ಅಸ್ತವ್ಯಸ್ತ.
ಬೆಂಗಳೂರು (ನ. 21): ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ (Untimely Rain) ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಎಲ್ಲೆಡೆ ಅಪಾರ ಬೆಳೆ ನಷ್ಟ, ಜನ ಜೀವನ ಅಸ್ತವ್ಯಸ್ತ. ಜನಸಾಮಾನ್ಯರ ಮಾತು ಬಿಡಿ, ಸರ್ವಶಕ್ತನಾದ ಪರಮಾತ್ಮನಿಗೆ ಜಲ ದಿಗ್ಭಂಧನ ಹಾಕಿದೆ. ತಿರುಪತಿ ತಿಮ್ಮಪ್ಪನ ಪ್ರಾಂಗಣದಲ್ಲಿ ನೀರು ನಿಂತಿರುವುದನ್ನು ನಾವೆಲ್ಲಾ ನೋಡಿದ್ದೇವೆ.
Add Asianetnews Kannada as a Preferred Source

ಬಂಗಾಳ ಕೊಲ್ಲಿಯಲ್ಲಿ ಆದ ವಾಯುಭಾರ ಕುಸಿತವೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ. 10 ವರ್ಷಗಳಲ್ಲಿ 40 ಚಂಡಮಾರುತಗಳನ್ನು ಕಂಡಿದ್ದೇವೆ. ಅಕ್ಟೋಬರ್ನಿಂದ ಡಿಸಂಬರ್ನಲ್ಲಿ ಚಂಡಮಾರುತ ಏಳುವುದು ಜಾಸ್ತಿ. ಹಾಗಾದರೆ ಸೈಕ್ಲೊನ್ಗಳು ಹೆಚ್ಚಾಗುತ್ತಿರೋದ್ಯಾಕೆ..?