Asianet Suvarna News Asianet Suvarna News

ವಿದೇಶಿ ಕಮ್ಯುನಿಸಂ ಒಪ್ಪುವುದಾದರೆ, ಭಾರತದ ಆರ್‌ಎಸ್ಎಸ್ ಒಪ್ಪುವುದರಲ್ಲಿ ತಪ್ಪೇನಿದೆ? ರಾಜ್ಯಪಾಲರ ಖಡಕ್ ಪ್ರಶ್ನೆ!

ಕೇರಳ ರಾಜ್ಯಾಪಾಲ ಮೊಹಮ್ಮದ್ ಆರಿಫ್ ಖಾನ್ ಹೇಳಿಕೆ, ಸುದ್ದಿಗೋಷ್ಠಿ ಆಡಳಿತ ರೂಡ ಸಿಪಿಐ ಹಾಗೂ ಕಾಂಗ್ರೆಸ್‌ಗೆ ಒಂದಲ್ಲಾ ಒಂದು ಸಂಕಷ್ಟ ತರುತ್ತಿದೆ. ಇದೀಗ  ಆರಿಫ್ ಮೊಹಮ್ಮದ್ ಖಾನ್ ಹಾಗೂ ಆರ್‌ಎಸ್ಎಸ್ ಮುಖ್ಯಸ್ಥ ಭೇಟಿ ಕುರಿತು ಹಲವು ಆರೋಪಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಖಡಕ್ ಪ್ರಶ್ನೆಗೆ ಪತ್ರಕರ್ತರೆ ತಬ್ಬಿಬ್ಬಾಗಿದ್ದಾರೆ.

First Published Sep 19, 2022, 7:25 PM IST | Last Updated Sep 19, 2022, 7:25 PM IST

ಕೇರಳ(ಸೆ.19):  ವಿದೇಶದ ಕಮ್ಯೂನಿಸಂ ಸಿದ್ದಾಂತವನ್ನು ಭಾರತದಲ್ಲಿ ಒಪ್ಪಿಕೊಳ್ಳುವುದರಲ್ಲಿ, ಅನುಸರಿಸುವುದರಲ್ಲಿ ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ಆದರೆ ಭಾರತದ ಮಣ್ಣಿನಲ್ಲಿ ಹುಟ್ಟಿದ ಆರ್‌ಎಸ್ಎಸ್ ಸಿದ್ಧಾಂತವನ್ನು ಒಪ್ಪಿಕೊಂಡರೆ ತಪ್ಪೇನು? ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ. ನಾನು ಆರ್‌ಎಸ್ಎಸ್ ಪ್ರಮುಖರನ್ನು ಭೇಟಿಯಾಗುವದರಿಂದ ತಪ್ಪೇನಿದೆ? ಕಣ್ಣೂರಿನಲ್ಲಿ ಎಷ್ಟು ಕೊಲೆ ನಡೆಯುತ್ತಿದೆ? ಇದನ್ನು ಯಾರು ತಡೆಯಬೇಕು? ಆಡಳಿತ ನಡೆಸುತ್ತಿರುವವರು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಇದಕ್ಕೆ ಆರ್‌ಎಸ್ಎಸ್ ಕಾರಣವಲ್ಲ. ನನಗೆ ಆರ್‌ಎಸ್ಎಸ್ ಸತತವಾಗಿ ಬೆಂಬಲ ನೀಡಿದೆ. ಅವರ ಬೈಠಕ್ ಸಭೆಯಲ್ಲಿ ನನ್ನನ್ನು ಆಹ್ವಾನಿಸಿದ್ದಾರೆ. ಆರ್‌ಎಸ್ಎಸ್ ಇದುವರೆಗೆ ಬದಲಾಗಿಲ್ಲ. ಆದರೆ ಇತರ ಹಲವು ಸಂಘಟನೆಗಳು ಆರಂಭದಲ್ಲಿ ನನಗೆ ಬೆಂಬಲ ನೀಡಿ ಬಳಿ ದೂರ ಉಳಿದುಕೊಂಡಿದೆ. ಪೂರ್ವಾಗ್ರಹ ಪೀಡಿತರಾಗಿ ಆರೋಪಗಳನ್ನು ಮಾಡಬೇಡಿ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.