Asianet Suvarna News Asianet Suvarna News

5 States Election: ಯೋಗಿ ಗೆಲುವಿಗೆ ಅಮಿತ್ ಶಾ ಪ್ರತಿಜ್ಞೆ, ಉತ್ತರ ಪ್ರದೇಶದಲ್ಲಿ ಸಂಚಲನ

ಪಂಚರಾಜ್ಯ ಚುನಾವಣೆಯಲ್ಲಿ (5 States Election) ಮಹತ್ವ ಪಡೆದುಕೊಂಡಿರುವ, ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ (Uttar Pradesh) ಚುನಾವಣಾ ಅಖಾಡದಲ್ಲಿ ಗೃಹ ಸಚಿವ ಅಮಿತ್ ಶಾ (Amit Shah) ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ನವದೆಹಲಿ (ಜ. 29): ಪಂಚರಾಜ್ಯ ಚುನಾವಣೆಯಲ್ಲಿ (5 States Election) ಮಹತ್ವ ಪಡೆದುಕೊಂಡಿರುವ, ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ (Uttar Pradesh) ಚುನಾವಣಾ ಅಖಾಡದಲ್ಲಿ ಗೃಹ ಸಚಿವ ಅಮಿತ್ ಶಾ (Amit Shah) ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇದು ಉತ್ತರ  ಪ್ರದೇಶದ ಚುನಾವಣೆ ಮಾತ್ರವಲ್ಲ, ದೇಶದ ಭಾಗ್ಯವನ್ನು ಬದಲಿಸುವ ಚುನಾವಣೆ ಎಂದು ಸಂಚಲನ ಮೂಡಿಸಿದ್ದಾರೆ. 'ಅಧಿಕಾರ ಅಖಿಲೇಶ್ ಯಾದವ್ ಕೈಯಲ್ಲಿದ್ದರೆ ಗೂಂಡಾರಾಜ್ಯ ಆಗಲಿದೆ. ಬಿಜೆಪಿ ಕೈಯಲ್ಲಿದ್ದರೆ ವಿಕಾಸವಾಗುತ್ತದೆ ಎಂದಿದ್ದಾರೆ. 

ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಸಾವಿರಾರು ಹಿಂದು ಕುಟುಂಬಗಳನ್ನು ಗುಳೆ ಹೋಗಿದ್ದ ಉತ್ತರಪ್ರದೇಶದ ಕೈರಾನಾಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ಅಭ್ಯರ್ಥಿಗಳ ಪರ ಮನೆ-ಮನೆ ಪ್ರಚಾರ ನಡೆಸಿದರು.

 

Video Top Stories