1991ರ ಧಾರ್ಮಿಕ ಕಾಯ್ದೆ ರದ್ದಾಗುತ್ತಾ.? ರದ್ದಾದರೆ ಪರಿಣಾಮವೇನು..?
ಅದು 17 ನೇ ಶತಮಾನದ ಅಂತ್ಯ. ಆ ವೇಳೆಗೆ ಮೊಘಲ್ ರಾಜ ಔರಂಗಜೇಬ್ ಭಾರತದ ಮೇಲೆ ದಾಳಿ ನಡೆಸುತ್ತಾನೆ. ಹಿಂದೂ ದೇವಾಲಯಗಳನ್ನು ಕೆಡವಿ, ಮಸೀದಿ ಕಟ್ಟಿದ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಅದು 17 ನೇ ಶತಮಾನದ ಅಂತ್ಯ. ಆ ವೇಳೆಗೆ ಮೊಘಲ್ ರಾಜ ಔರಂಗಜೇಬ್ ಭಾರತದ ಮೇಲೆ ದಾಳಿ ನಡೆಸುತ್ತಾನೆ. ಹಿಂದೂ ದೇವಾಲಯಗಳನ್ನು ಕೆಡವಿ, ಮಸೀದಿ ಕಟ್ಟಿದ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಅಣತಹ ದೇವಾಲಯಗಳ ಪೈಕಿ ಅಯೋಧ್ಯೆ ಕೂಡಾ ಒಂದು. ಅಯೋಧ್ಯಾ ವಿವಾದ, ಕೋರ್ಟ್, ಈಗ ರಾಮಮಂದಿರ ನಿರ್ಮಾಣವಾಗುತ್ತಿದೆ.
ಅಯೋಧ್ಯೆಯ ಬಳಿಕ ಗ್ಯಾನವಾಪಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಗ್ಯಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆ ನಡೆಸುವಂತೆ ಸಲ್ಲಿಸಲಾದ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಸಲ್ಲಿಸಲಾಗಿದ್ದ ಮುಸ್ಲಿಂ ಅರ್ಜಿಯನ್ನು ಸೋಮವಾರ ವಾರಾಣಸಿ ಜಿಲ್ಲಾ ಕೋರ್ಚ್ ನಡೆಸಿದೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿದೆ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ 1991 ಕಾಯ್ದೆ ಏನು ಹೇಳುತ್ತೆ..? ರಾಜ್ಯಸಭಾ ಚುನಾವಣೆ ಬಳಿಕ 1991ರ ಧಾರ್ಮಿಕ ಸ್ಥಳಗಳು, ಕಾನೂನು ಸೇರಿದಂತೆ ಹಲವು ಕಾನೂನುಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆಯನ್ನು ತರುತ್ತಾ..? ರಾಜಕೀಯ ನಾಯಕರು ಏನಂತಾರೆ..? ಇಲ್ಲಿದೆ ವಿವರ