ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ದತ್ತಾಜೀ, ಸೊರಬದಿಂದ ಲಖನೌವರೆಗಿನ ಜರ್ನಿ ಇದು

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಎರಡನೇ ಅತಿದೊಡ್ಡ ಹುದ್ದೆಯಾದ ಸರಕಾರ್ಯವಾಹ ಸ್ಥಾನವು ಕನ್ನಡಿಗರಿಗೆ ಲಭಿಸಿದ್ದು, ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕಗೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 21): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಎರಡನೇ ಅತಿದೊಡ್ಡ ಹುದ್ದೆಯಾದ ಸರಕಾರ್ಯವಾಹ ಸ್ಥಾನವು ಕನ್ನಡಿಗರಿಗೆ ಲಭಿಸಿದ್ದು, ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಲಂಚ, ಮಂಚ, ಪರಪಂಚ... 300 ಸೀಡಿಗಳ ಮಹಾರಹಸ್ಯವಿದು...!

ಸರಸಂಘಚಾಲಕ ಮೋಹನ್‌ ಭಾಗವತ್‌ ಹುದ್ದೆಯ ನಂತರ ಸರಕಾರ್ಯವಾಹ ಸ್ಥಾನ ದೊಡ್ಡ ಹುದ್ದೆಯಾಗಿದೆ. ಕನ್ನಡಿಗ ಹೊ.ವೇ. ಶೇಷಾದ್ರಿ ಅವರ ಬಳಿಕ ದತ್ತಾತ್ರೇಯ ಹೊಸಬಾಳೆ ಅವರಿಗೆ ಈ ಉನ್ನತ ಹುದ್ದೆ ಲಭಿಸಿದೆ. ಈವರೆಗೆ ಈ ಸ್ಥಾನದ ಜವಾಬ್ದಾರಿಯನ್ನು ಸುರೇಶ ಭಯ್ಯಾಜಿ ಜೋಶಿ ನಿರ್ವಹಿಸುತ್ತಿದ್ದರು. ಇನ್ನು ಮೂರು ವರ್ಷಗಳ ಕಾಲ ದತ್ತಾಜಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ದತ್ತಾತ್ರೇಯ ಹೊಸಬಾಳೆ ಅವರ ಹಿನ್ನಲೆ, ಸಾಧನೆ ಬಗ್ಗೆ ಒಂದು ವರದಿ ಇಲ್ಲಿದೆ. 

Related Video