ಹೇಗೆ ನಡೆಯುತ್ತಿದೆ ಗೊತ್ತಾ ಶತ್ರು ನಾಶ ಯಾಗ..? ಉಗ್ರ ಸಂಗ ಮಾಡಿ ಕೆಟ್ಟು ಕೂತನಾ ಟ್ರುಡೊ?

ಉಗ್ರ ಸಂಗ ಮಾಡಿ ಕೆಟ್ಟು ಕೂತನಾ ಟ್ರುಡೊ..?
ಕಟ್ಟುಕತೆ ಕಟ್ಟಿದವನಿಗೆ ತಕ್ಕ ಶಾಸ್ತಿ ಆಯ್ತು..!
ಭಾರತ ಕೊಟ್ಟ ಪೆಟ್ಟಿಗೆ ಏನಾದ ಗೊತ್ತಾ ಟ್ರುಡೊ?
 

Share this Video
  • FB
  • Linkdin
  • Whatsapp

ಭಾರತವನ್ನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಕೆಣಕಿಬಿಟ್ಟಿದ್ದಾನೆ. ಅದರ ಪರಿಣಾಮ ಏನು ಅನ್ನೋದು ಅವನಿಗೆ ಕ್ಷಣಕ್ಷಣಕ್ಕೂ ಸ್ಪಷ್ಟವಾಗಿ ಅರ್ಥವಾಗ್ತಾ ಇದೆ. ಆದರೂ ಕೂಡ, ಜಟ್ಟಿ ಜಾರಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗೆ ಮೆರೆಯುತ್ತಿದ್ದಾನೆ. ಆದ್ರೆ ಆ ಮೆರೆದಾಟಕ್ಕೆ ಫುಲ್ ಸ್ಟಾಪ್ ಹಾಕೋಕೆ ಭಾರತ(India) ಮುಂದಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದಿನ ಮಾತು. ಅವತ್ತು ಭಾರತವನ್ನ ಪಕ್ಕದಲ್ಲಿರೋ ಪಾಪಿ ದೇಶ ಪಾಕಿಸ್ತಾನ(Pakisthan) ಕೆಣಕಿತ್ತು. ಆಗ ರೋಶಾವೇಶದಲ್ಲಿ ಮೋದಿ ಈ ಮಾತನ್ನ ಹೇಳಿದ್ರು. ಅಗತ್ಯ ಬಿದ್ರೆ, ಉಗ್ರರನ್ನ ನಿಮ್ಮದೇ ನೆಲದಲ್ಲಿ ನುಗ್ಗಿ ಹೊಡೀತೀವಿ ಅಂತ ಹೇಳಿದ್ರು. ಈ ಮಾತು ಹೇಳಿದ್ದಾಗಲೇ ನಡೆದಿತ್ತು, ಏರ್ ಸ್ಟ್ರೈಕ್. ಅವತ್ತು ಮೋದಿ ಅವರು ಈ ಮಾತು ಹೇಳ್ದಾಗ, ಅವರ ಟಾರ್ಗೆಟ್ ಕೇವಲ ಪಾಕಿಸ್ತಾನ ಮಾತ್ರವೇ ಆಗಿರ್ಲಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿ, ಭಾರತದ ವಿರುದ್ಧ ಷಡ್ಯಂತ್ರ ನಡೀತಿದ್ರೆ, ಅಂಥಾ ಉಗ್ರ ಪಾಳಯವನ್ನ ಧ್ವಂಸ ಮಾಡ್ತೀವಿ ಅನ್ನೋ ಸಂದೇಶ ರವಾನಿದ್ರು. ಇನ್ನೂ ಕೆನಡಾ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ಅಷ್ಟೇ ಅಲ್ಲ, ಸತ್ತವನಿಗೆ ನೆಟ್ಟಗೆ ಕೆನಡಾ(canada) ಪೌರತ್ವ ಕೂಡ ಸಿಕ್ಕಿರ್ಲಿಲ್ಲ. ಅದಕ್ಕೂ ಅವನು ಆಯ್ದುಕೊಂಡಿದ್ದು ಕಳ್ಳದಾರಿನೇ. ಇಲ್ಲಿಂದ ಫೇಕ್ ಪಾಸ್ ಪೋರ್ಟ್ ಇಟ್ಕೊಂಡು ಹೋದೋನು, ಅಲ್ಲೊಂದು ಫೇಕ್ ಮದುವೆಯಾಗಿ, ನಾಟಕವಾಡಿ ಕೆನಡಾದ ಪ್ರಜೆ ಅನ್ನಿಸಿಕೊಂಡ. ಅವನನ್ನ ಭಾರತ ಯಾವತ್ತೋ ಉಗ್ರ ಅಂತ ಕರೆದಿತ್ತು. ಅಂಥವನನ್ನ ತನ್ನ ತೋಳತೆಕ್ಕೆಯಲ್ಲಿಟ್ಕೊಂಡು ಸಾಕಿತ್ತು ಕೆನಡಾ. ಅವನು ಸತ್ತಿದ್ದೂ ಕೂಡ ಯಾರೋ ಅಪರಿಚಿತರ ಗುಂಡೇಟಿಗೆ. ಆದ್ರೆ, ಅವನ ಕೊಲೆಯ ಆರೋಪನ ಕೆನಡಾ ಭಾರತದ ಮೇಲೆ ಹಾಕ್ತಾ ಇದೆ. ಇದಕ್ಕೆ ಭಾರತ ಬೆಂಕಿಯ ಪ್ರತಿಕ್ರಿಯೆನೇ ಕೊಟ್ಟಿದೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಇಂಡಿಯನ್ ಕಿಚನ್‌ನಲ್ಲಿ ಗ್ರೇಟ್ ಆಯುರ್ವೇದ ಅಡಗಿದೆ: ಡಾ.ಸಿ.ಎ. ಕಿಶೋರ್

Related Video