
NewsHour ಅಮರನಾಥ ಮೇಘಸ್ಫೋಟ 15 ಬಲಿ, ಪ್ರವಾಹದಲ್ಲಿ ಕೊಚ್ಚಿ ಹೊದ 40 ಭಕ್ತರು!
- ಅಮರನಾಥ ಯಾತ್ರಾ ಗುಹೆ ಬಳಿ ಮೇಘಸ್ಪೋಟ
- ರಕ್ಷಣ ಕಾರ್ಯ ಚುರುಕು, ಕೊಚ್ಚಿ ಹೋದ ಭಕ್ತರು
- ಸಹಾಯವಾಣಿ ತೆರೆದ ಜಿಲ್ಲಾಡಳಿತ
ಅಮರನಾಥ ಯಾತ್ರೆ ಗುಹೆ ಬಳಿ ಮೇಘಸ್ಫೋಟ ಸಂಭವಿಸಿದೆ. ದಕ್ಷಿಣ ಕಾಶ್ಮೀರದ ಹಿಮಾಲಯ ವರದಲ್ಲಿ ಏಕಾಏಕಿ ಭಾರಿ ಮಳೆಗೆ ಕಣಿವೆ ತಟದಲ್ಲಿದ್ದ ಬೇಸ್ ಕ್ಯಾಂಪ್ ಬಳಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೇ ತಟದಲ್ಲಿನ ಶಿಬಿರಗಳಲ್ಲಿದ್ದ ಭಕ್ತರು ಕೊಚ್ಚಿ ಹೋಗಿದ್ದಾರೆ. 15 ಮಂದಿ ಸಾವನ್ನಪ್ಪಿದ್ದಾರೆ. 40 ಮಂದಿ ಕಣ್ಣರೆಯಾಗಿದ್ದಾರೆ. 13 ಮೃತದೇಹ ಹೊರಗೆ ತೆಗೆಯಲಾಗಿದೆ. ಇದಲ್ಲಿ 8 ಮಹಿಳೆಯರು ಹಾಗೂ ಇಬ್ಬರು ಪುರುಷರಾಗಿದ್ದಾರೆ. ಕರ್ನಾಟಕದ 13 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನೂ ಒಂದು ವಾರ ಇದೇ ರೀತಿ ಮಳೆ ಮುಂದುವರಿಯಲಿದೆ ಅನ್ನೋ ಮುನ್ಸೂಚನೆ ನೀಡಲಾಗಿದೆ. ಈ ದಿನದ ಕಂಪ್ಲೀಟ್ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
Add Asianetnews Kannada as a Preferred Source
