
ನಿರ್ಲಕ್ಷ್ಯ ಬೇಡ: ಯುವಕರೇ ಹೃದಯದ ಕಡೆ ಗಮನ ಹರಿಸಿ..!
ಕೊರೋನಾ ಮಧ್ಯೆ ಆರೋಗ್ಯದ ನಿರ್ಲಕ್ಷ್ಯ ಮಾಡಬೇಡಿ. ಹೃದ್ರೋಗ ತಜ್ಞ ಮಂಜುನಾಥ್ ಅವರು ಹೃದಯ ಸಂಬಂಧಿ ಕಾಯಿಲೆ ಹೆಚ್ಚಳದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. 2030ರ ವೇಳೆಗೆ ಭಾರತವೇ ಹೃದ್ರೋಗದಲ್ಲಿ ನಂಬರ್ 1 ದೇಶವಾಗಲಿದೆ.
ಕೊರೋನಾ ಮಧ್ಯೆ ಆರೋಗ್ಯದ ನಿರ್ಲಕ್ಷ್ಯ ಮಾಡಬೇಡಿ. ಹೃದ್ರೋಗ ತಜ್ಞ ಮಂಜುನಾಥ್ ಅವರು ಹೃದಯ ಸಂಬಂಧಿ ಕಾಯಿಲೆ ಹೆಚ್ಚಳದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. 2030ರ ವೇಳೆಗೆ ಭಾರತವೇ ಹೃದ್ರೋಗದಲ್ಲಿ ನಂಬರ್ 1 ದೇಶವಾಗಲಿದೆ. ಈಗಾಗಲೇ ಬೆಂಗಳೂರು ಡಯಾಬಿಟಿಸ್ ಕ್ಯಾಪಿಟಲ್ ಆಗಿ ಬದಲಾಗುತ್ತಿದೆ. ಸಕ್ಕರೆ ಕಾಯಿಲೆ ಇದ್ದವರಿಗೆ ಹೃದಯಾಘಾತದ ಅಪಾಯವೂ ಹೆಚ್ಚಾಗಿದ್ದು ಯುವಕರು ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್ 1: ತಜ್ಞರ ಶಾಕಿಂಗ್ ಮಾಹಿತಿ
ಈಗಾಗಲೇ 40 ವರ್ಷದ ಆಸುಪಾಸಿನಲ್ಲಿರುವ ಜನರಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚಾಗುತ್ತಿದ್ದು, ಇದುವೇ ದೊಡ್ಡ ಸೈಲೆಂಟ್ ಕಿಲ್ಲರ್ ಆಗಿ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಹೃದಯದ ಕಾಳಜಿ ವಹಿಸುವುದು ಇಂದಿನ ಅತ್ಯಂತ ಅಗತ್ಯದ ಕೆಲಸವಾಗಿದೆ.