Asianet Suvarna News Asianet Suvarna News

ಈ ಸಂವತ್ಸರ ಶುಭ ತರುವುದೇ? ಡಾ. ಹರೀಶ್ ಕಶ್ಯಪ್ ಏನಂತಾರೆ?

ಶುಭಕೃತ್ ನಾಮ ಸಂವತ್ಸರ ಹೆಸರಿಗೆ ತಕ್ಕಂತೆ ಶುಭಕರವಾಗಿದೆಯೇ? ಯಾವೆಲ್ಲ ರಾಶಿಗಳಿಗೆ ಜಯಲಕ್ಷ್ಮೀ ಒಲಿಯುತ್ತಾಳೆ? ಈ ವರ್ಷದ ಫಲಗಳ ಬಗ್ಗೆ ಜ್ಯೋತಿಷಿ ಡಾ. ಹರೀಶ್ ಕಶ್ಯಪ್ ಏನಂತಾರೆ?

ಶುಭಕೃತ್ ನಾಮ ಸಂವತ್ಸರ(Shubhakruth Samvatsara)ವು ಶುಭವನ್ನು ಹೆಚ್ಚಾಗಿ ತರಲಿದೆ. ಈ ವರ್ಷ ದೇಶದ ಜನರು ಕೊಂಚ ನಿರಾಳತೆಯ ನಿಟ್ಟುಸಿರು ಬಿಡಬಹುದು ಎನ್ನುತ್ತಾರೆ ಜ್ಯೋತಿಷಿ ಡಾ. ಹರೀಶ್ ಕಶ್ಯಪ್.

ವಿಕಾರಿ, ಪ್ಲವ, ಶಾರ್ವರಿ ನಾಮ ಸಂವತ್ಸರಗಳು ಹೆಸರಲ್ಲೇ ಕೆಟ್ಟದ್ದನ್ನು ಸೂಚಿಸುತ್ತಿದ್ದವು. ಅಂತೆಯೇ ಕೊರೋನಾ ರೋಗವು ಜಗತ್ತನ್ನೇ ನಡುಗಿಸಿ ಜಗತ್ತು ಕೆಟ್ಟದ್ದನ್ನೇ ನೋಡಿತು. ಆದರೆ, ಈ ಬಾರಿ ಹೆಸರಲ್ಲೇ ಶುಭ ಎಂದಿರುವುದರಿಂದ ಮಂಗಳಕರ ವಿಚಾರಗಳನ್ನು ಎದುರು ನೋಡಬಹುದು.

ಬದಲಾವಣೆ ತರುವ ಈ ಸಂವತ್ಸರದ ಪ್ರಮುಖ ಗ್ರಹಪಲ್ಲಟಗಳು ಹೀಗಿವೆ..

ಶನಿವಾರ ಆರಂಭವಾಗುತ್ತಿರುವ ಈ ವರ್ಷಕ್ಕೆ ಶನೈಶ್ಚರನೇ ರಾಜನಾಗಿರುತ್ತಾನೆ. ಆತ ಕರ್ಮಗಳ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಫಲ ನೀಡಲಿದ್ದಾನೆ. ಈ ವರ್ಷದ ಗ್ರಹ ಗತಿ, ರಾಶಿಗಳ ಫಲ, ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಲ್ಲವನ್ನೂ ವಿವರಿಸಿದ್ದಾರೆ. 

Video Top Stories