
ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ: ವಿಷ್ಣುವಿನ ದರ್ಶನ ಮಾಡಿದ್ರೆ ಸ್ವರ್ಗ ಪ್ರಾಪ್ತಿ
ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ಏಕಾದಶಿ ದಿನ ದೇಗುಲ ಪ್ರವೇಶಿಸಿದರೆ ಮುಕ್ತಿ ಎಂಬ ನಂಬಿಕೆ ಇದೆ.
ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ವಿಷ್ಣುವಿನ ದರ್ಶನ ಮಾಡಿದ್ರೆ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಇದೆ. ಹೊಸ ವರ್ಷದ ಆರಂಭದಲ್ಲೇ ವೈಕುಂಠ ಏಕಾದಶಿ ಸಂಭ್ರಮ ಬಂದಿದ್ದು, ಏಕಾದಶಿ ದಿನ ನಾಡಿನಾದ್ಯಂತ ಭಕ್ತರಿಂದ ವಿಷ್ಣು ನಾಮಸ್ಮರಣೆ ಮಾಡಲಾಗುತ್ತದೆ. ವೈಕುಂಠ ಏಕಾದಶಿ ಈ ದಿನವನ್ನು ಹಿಂದೂಗಳು ತುಂಬಾ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಹಾಗಾದ್ರೆ ವೈಕುಂಟ ಏಕಾದಶಿ ಹಿನ್ನೆಲೆ ಏನು? ಇವತ್ತು ಸಾಕಷ್ಟು ಜನ ಉಪವಾಸವಿದ್ದು ವಿಷ್ಣುವಿನ ಪೂಜೆಯನ್ನು ಮಾಡುತ್ತಾರೆ?. ಹಾಗಾದ್ರೆ ಈ ದಿನ ವಿಷ್ಣುವಿನ ಪೂಜೆಯನ್ನು ಯಾವ ರೀತಿಯಲ್ಲಿ ಮಾಡಬೇಕಾಗತ್ತೆ. ಹಾಗೆ ಇದರ ಪೌರಾಣಿಕ ಹಿನ್ನೆಲೆ ಏನು ಎಲ್ಲದರ ಬಗ್ಗೆ ಶ್ರೀಕಮಠ ಶಾಸ್ತ್ರಿಗಳು ತಿಳಿಸಿದ್ದಾರೆ.
Add Asianetnews Kannada as a Preferred Source
