Pitru Paksha 2022: ಹುಟ್ಟುತ್ತಲೇ ಜೊತೆಯಾಗುವ ಮೂರು ಋಣಗಳು, ಈ ಭಾರ ಕಳಚಿಕೊಳ್ಳುವುದು ಹೇಗೆ?
ಮಗು ಹುಟ್ಟುತ್ತಿದ್ದಂತೆಯೇ 3 ಋಣಭಾರಗಳು ಅದರ ಹೆಗಲೇರುತ್ತವೆ. ಅವುಗಳಲ್ಲಿ ಒಂದನ್ನು ಕಳಚಿಕೊಳ್ಳಲು ಪಿತೃಪಕ್ಷ ಉತ್ತಮ ಸಮಯವಾಗಿದೆ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಭಾನುಪ್ರಕಾಶ್ ಶರ್ಮಾ.
ಭಾರತೀಯ ಪರಂಪರೆಯಲ್ಲಿ ಅನೇಕ ಹಬ್ಬಹರಿದಿನಗಳನ್ನು ಆಚರಿಸುತ್ತೀವಿ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯಿಂದ 15 ದಿನಗಳ ಕಾಲ ಇಡೀ ಭಾರತದಾದ್ಯಂತ ಪಿತೃಪಕ್ಷ ಆಚರಿಸಲಾಗುತ್ತದೆ. ಮಾನವ ಜನ್ಮ ಬಹಳ ದೊಡ್ಡದು. ಮಗು ಹುಟ್ಟಿದಾಗ ಆತನಿಗೆ ದೇವಋಣ, ಋಷಿ ಋಣ, ಪಿತೃಋಣ ಹುಟ್ಟುತ್ತಲೇ ಜೊತೆಯಾಗುತ್ತವೆ. ಈ ಮೂರೂ ಋಣಗಳಿಂದ ಮುಕ್ತಿ ಪಡೆಯುವುದು ಹೇಗೆ? ಶ್ರೀಮಾನ್ ಭಾನುಪ್ರಕಾಶ್ ಶರ್ಮಾ ತಿಳಿಸುತ್ತಾರೆ ಕೇಳೋಣ..