ಮರೆವಿನ ಸಮಸ್ಯೆ ನೀಗಿಸೋ ಮಹಾಮಂತ್ರ
ಔಷಧಿ ಮತ್ತು ಬಾದಾಮಿ ಇಲ್ಲದಿದ್ದರೂ ಸಹ, ಈ ಮಂತ್ರಗಳಿಂದ ನಿಮ್ಮ ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸಬಹುದು.
ಮರೆವು ಈಗಂತೂ ಸರ್ವೇಸಾಮಾನ್ಯ ಸಮಸ್ಯೆ. ವಿದ್ಯಾರ್ಥಿಗಳು ಈ ಮರೆವಿನಿಂದಾಗಿ ಸಾಕಷ್ಟು ಕಷ್ಟನಷ್ಟ ಎದುರಿಸುತ್ತಾರೆ. ಎಲ್ಲ ಉತ್ತರ ಗೊತ್ತಿದ್ದರೂ ಬೇಕಾದ ಸಮಯಕ್ಕೆ ನೆನಪಿಗೆ ಬಾರದೆ ಒದ್ದಾಡುತ್ತಾರೆ. ಇದು ಪೋಷಕರಿಗೆ ದೊಡ್ಡ ತಲೆನೋವಾಗುತ್ತದೆ. ಹೇಗಪ್ಪಾ ಮಕ್ಕಳನ್ನು ಈ ಮರೆವಿನ ಸಮಸ್ಯೆಯಿಂದ ಹೊರ ತರುವುದು ಎಂದವರು ಚಿಂತೆಗೆ ಬೀಳುತ್ತಾರೆ. ಆದರೆ, ನೆನಪಿನ ಶಕ್ತಿಯನ್ನು ಹೆಚ್ಚಿಸಲು ಮಂತ್ರದಿಂದ ಸಾಧ್ಯವೆಂದು ನಿಮಗೆ ತಿಳಿದಿದೆಯೇ?
ಈ ದೇವಸ್ಥಾನಕ್ಕೆ ದಂಪತಿ ಒಟ್ಟಿಗೆ ದೇವರ ದರ್ಶನ ಮಾಡುವುದೇ ನಿಷಿದ್ಧ
ಹೌದು, ವಾಕ್ಶಕ್ತಿ, ನೆನಪಿನ ಶಕ್ತಿ ಹೆಚ್ಚಿಸುವ ಈ ಮಂತ್ರವನ್ನು ಪ್ರತಿದಿನ ಹೇಳಿದರೆ ಮರೆವು ಕಾಡದು. ನಿಮ್ಮ ಬುದ್ಧಿ ಶಕ್ತಿ, ವಾಕ್ಶಕ್ತಿ ಹೆಚ್ಚಿಸುವ ಮಹಾಮಂತ್ರ ಜ್ಯೋತಿಷ್ಯದಲ್ಲಿದೆ. ಅದ್ಯಾವ ಮಂತ್ರ, ಹೇಗೆ ಪಠಿಸಬೇಕು, ಯಾವಾಗ ಪಠಿಸಬೇಕು ಎಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ಹೇಳುತ್ತಾರೆ.