Asianet Suvarna News Asianet Suvarna News

ಇಂದು ಗಣೇಶ ಚತುರ್ಥಿ: ಗಣೇಶನ ರೂಪದ ಹಿಂದಿದೆ ಈ ಪೌರಾಣಿಕ ಕಥೆಗಳು

ಇಂದು ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಎಲ್ಲೆಡೆ ಗಣಪತಿಯ ಮೂರ್ತಿ ಪ್ರತಿಷ್ಠಾಪನೆ, ಪೂಜೆ, ಸಡಗರ, ಸಂಭ್ರಮ ಮನೆ ಮಾಡಿದೆ. ಗಣಪತಿಯ ರೂಪ, ಹುಟ್ಟಿನ ಬಗ್ಗೆ ಬೇರೆ ಬೇರೆ ಕಥೆಗಳಿವೆ. 

ಇಂದು ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಎಲ್ಲೆಡೆ ಗಣಪತಿಯ ಮೂರ್ತಿ ಪ್ರತಿಷ್ಠಾಪನೆ, ಪೂಜೆ, ಸಡಗರ, ಸಂಭ್ರಮ ಮನೆ ಮಾಡಿದೆ. ಗಣಪತಿಯ ರೂಪ, ಹುಟ್ಟಿನ ಬಗ್ಗೆ ಬೇರೆ ಬೇರೆ ಕಥೆಗಳಿವೆ. ಶಿವ ಒಮ್ಮೆ ಮಂದಹಾಸ ಬೀರಿದನಂತೆ. ಆ ನಗುವಿನಿಂದ ಒಂದು ಪುಟ್ಟ ಕಂದ ಹುಟ್ಟುತ್ತಾನೆ. ಆ ಕಂದನ ಸೌಂದರ್ಯ ನೋಡಿ ಪಾರ್ವತಿ ಕೂಡಾ ಮೈಮರೆಯುತ್ತಾಳೆ. ನನ್ನ ನಗುವಿಗಿಲ್ಲದ ಮಹತ್ವ ನನ್ನ ನಗುವಿನಿಂದ ಹುಟ್ಟಿದ ಮಗುವಿಗೆ ಕೊಟ್ಟಿದ್ದಕ್ಕೆ ಶಿವ ಕೋಪೋದ್ರಿಕ್ತನಾಗುತ್ತಾನೆ. ಕೊನೆಗೆ ಪಾರ್ವತಿ ಶಿವನನ್ನು ಸಮಾಧಾನಿಸುತ್ತಾಳೆ. 

Video Top Stories