Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!

ಬ್ರಹ್ಮಾಂಡ ಗುರೂಜಿ 2025ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. ಮೋದಿ ರಾಜೀನಾಮೆ, ಯೋಗಿ ಆದಿತ್ಯನಾಥ್ ಪ್ರಧಾನಿ ಸ್ಥಾನ, ಡಿಕೆ ಶಿವಕುಮಾರ್ ಸಿಎಂ ಆಗುವ ಸಾಧ್ಯತೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.20): 2025ರ ಕುರಿತು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ. ಮಕರ ಸಂಕ್ರಾತಿಯಂದು ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶವಾಗಲಿಲ್ಲ ಏಕೆ? ಇದರಿಂದ ಏನಾದರೂ ಗಂಡಾಂತರ ಕಾದಿದೆಯಾ? ಭಾರತದ ರಾಜಕಾರಣ ಕುರಿತು ಈ ವರ್ಷದ ಭವಿಷ್ಯವಾಣಿಯಲ್ಲಿ ಏನಿದೆ? ಒಟ್ಟಾರೆಯಾಗಿ 2025ರ ಭವಿಷ್ಯದ ಕುರಿತು ಬ್ರಹ್ಮಾಂಡ ಗುರೂಜಿ ಏನೆಲ್ಲ ಭವಿಷ್ಯ ನುಡಿದಿದ್ದಾರೆ ಅನ್ನೋದರ ವಿವರ ಇಲ್ಲಿದೆ.

Add Asianetnews Kannada as a Preferred SourcegooglePreferred

ಶೇ. 80ರಷ್ಟು ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಅವರ ನಂತರ ಯೋಗಿ ಆದಿತ್ಯನಾಥ್​​ ಅಥವಾ ಬೇರೆ ಸನ್ಯಾಸಿಗಳಿಗೆ ಮುಂದಿನ ಪ್ರಧಾನಿಯಾಗುವ ಯೋಗವಿದೆ ಎಂದು ಹೇಳಿದ್ದಾರೆ.

ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ; ಸ್ಟಾರ್ ನಟರ ಸಾವು, ಡಿಕೆಶಿಗೆ ಉನ್ನತ ಸ್ಥಾನ, ಮೋದಿ ರಾಜೀನಾಮೆ!

ರಾಜ್ಯ ರಾಜಕಾರಣದಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಮಧ್ಯೆ ಒಳ ಗದ್ದಲದ ಕುರಿತು ಬ್ರಹ್ಮಾಂಡ ಗುರೂಜಿ ಮಾತನಾಡಿದ್ದು, ಸಿಎಂ ಪಟ್ಟಕ್ಕೇರುವ ಭಾಗ್ಯ ಡಿಕೆ ಶಿವಕುಮಾರ್‌ಗೆ ಇದೆ ಎಂದಿದ್ದಾರೆ.

Related Video