
ಸ್ನೇಹದ ಮಹತ್ವವನ್ನು ಭಾಗವತದ ಈ ಕಥೆ ಬಹಳ ಸೊಗಸಾಗಿ ಹೇಳಿದೆ, ಕೇಳೋಣ ಬನ್ನಿ
ಭಾಗವತದಲ್ಲಿ ಸ್ನೇಹದ ಬಗ್ಗೆ ಒಂದು ಕತೆ ಬರುತ್ತದೆ. ಹಿಂದೆ ಪುರಂಜನ ಎನ್ನುವವನಿದ್ದ. ರಾಜ್ಯ ಕಟ್ಟುವುದಕ್ಕೆ ಭೂಮಿಗೆ ಬರುತ್ತಾನೆ. ಇಲ್ಲಿ ಸುಖಲೋಲುಪಗಳಲ್ಲಿ ಮೈಮರೆಯುತ್ತಾನೆ. ಆತ್ಮೀಯ ಸ್ನೇಹಿತನನ್ನು ಮರೆತು ಬಿಡುತ್ತಾನೆ. ಆ ಸ್ನೇಹಿತ ಪುರಂಜನನಿಗಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಸ್ನೇಹಿತನ ನೆನಪೇ ಇರುವುದಿಲ್ಲ.
ಭಾಗವತದಲ್ಲಿ ಸ್ನೇಹದ ಬಗ್ಗೆ ಒಂದು ಕತೆ ಬರುತ್ತದೆ. ಹಿಂದೆ ಪುರಂಜನ ಎನ್ನುವವನಿದ್ದ. ರಾಜ್ಯ ಕಟ್ಟುವುದಕ್ಕೆ ಭೂಮಿಗೆ ಬರುತ್ತಾನೆ. ಇಲ್ಲಿ ಸುಖಲೋಲುಪಗಳಲ್ಲಿ ಮೈಮರೆಯುತ್ತಾನೆ. ಆತ್ಮೀಯ ಸ್ನೇಹಿತನನ್ನು ಮರೆತು ಬಿಡುತ್ತಾನೆ. ಆ ಸ್ನೇಹಿತ ಪುರಂಜನನಿಗಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಸ್ನೇಹಿತನ ನೆನಪೇ ಇರುವುದಿಲ್ಲ.
Add Asianetnews Kannada as a Preferred Source

ಹೀಗೆ ಕಾಲ ಸರಿಯುತ್ತಾ ಹೋಗುತ್ತದೆ. ಪುರಂಜನನ ಕಾಲ ಮುಕ್ತಾಯವಾಗುತ್ತದೆ. ಮುಂದಿನ ಜನ್ಮದಲ್ಲಿ ಆತ ವೈಧರ್ವಿ ಎನ್ನುವ ಕ್ಷತ್ರಿಯನಾಗಿ ಹುಟ್ಟುತ್ತಾನೆ. ಆಗ ಬ್ರಾಹ್ಮಣನೊಬ್ಬ ವೈಧರ್ವಿಗೆ ಹಿಂದಿನ ಜನ್ಮದ ಸ್ನೇಹದ ಬಗ್ಗೆ ನೆನಪಿಸುತ್ತಾನೆ. ನೀನು ಸ್ನೇಹವನ್ನು ಮರೆತಿದ್ದಕ್ಕೆ ನಿನಗೆ ಈ ಗತಿ ಬಂದಿದೆ ಎಂದು ನೆನಪಿಸುತ್ತಾನೆ. ಆಗ ವೈಧರ್ವಿ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ' ಎನ್ನುತ್ತಾಳೆ. ಇದನ್ನು ನಾರದರು ಈ ರೀತಿ ಹೇಳುತ್ತಾರೆ.