
ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭಕ್ಕೆ ಸಿದ್ಧತೆ: ಸಚಿವ ನಾಗೇಶ್
* ತಜ್ಞರ ಸಲಹೆ ಆಧರಿಸಿ ಶಾಲೆ ಆರಂಭಕ್ಕೆ ತಯಾರಿ
* ಸೋಂಕು ಹೆಚ್ಚಳವಾಗದ್ದರಿಂದ ನಮಗೆ ಧೈರ್ಯ ಬಂದಿದೆ
* 9ರಿಂದ 12 ತರಗತಿ ಆರಂಭಿಸಿದ ನಂತರ ಕೊರೋನಾ ಹೆಚ್ಚಳವಾಗಿಲ್ಲ
ಬೆಂಗಳೂರು(ಆ.30): ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ. ತಜ್ಞರ ಸಲಹೆ ಆಧರಿಸಿ ಶಾಲೆ ಆರಂಭಕ್ಕೆ ತಯಾರಿಯನ್ನ ಮಾಡಿಕೊಳ್ಳಲಾಗುತ್ತಿದೆ. 9ರಿಂದ 12 ತರಗತಿ ಆರಂಭಿಸಿದ ನಂತರ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಸೋಂಕು ಹೆಚ್ಚಳವಾಗದ್ದರಿಂದ ನಮಗೆ ಧೈರ್ಯ ಬಂದಿದೆ ಅಂತ ಹೇಳಿದ್ದಾರೆ.
Add Asianetnews Kannada as a Preferred Source
