ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!

ಜಗಳೂರಿನಲ್ಲಿ ಅತಿಹೆಚ್ಚು ದೇವಾಲಯಗಳಿದೆ ಆದ್ರೆ ಬಸ್​ ಸೌಲಭ್ಯವಿಲ್ಲ.  ದಾವಣಗೆರೆ- ಜಗಳೂರು ಬಳ್ಳಾರಿಗೆ ನೇರ ಬಸ್​ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ 32ಕ್ಕೂ ಹೆಚ್ಚು ಸಂಘಟನೆ ಸಾಥ್​ ನೀಡಿದವು.

Share this Video
  • FB
  • Linkdin
  • Whatsapp

ದಾವಣಗೆರೆ: ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಸಾರಿಗೆ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಜಗಳೂರು ಪಟ್ಟಣದಿಂದ ದಾವಣಗೆರೆವರೆಗೆ ಪಾದಾಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಕಳೆದ 20 ವರ್ಷಗಳಿಂದ ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ತೆರೆಯುವ ಬೇಡಿಕೆಯಿದೆ. 2022ರಲ್ಲಿ ಡಿಪೋಗೆ 4 ಎಕೆರೆ ಜಮೀನು ಮಂಜೂರು ಮಾಡಲಾಗಿದೆ. ಜಗಳೂರು ಗ್ರಾಮಾಂತರ ಮಹಿಳೆಯರಿಗೆ ಶಕ್ತಿಯೋಜನೆ ಸೌಲಭ್ಯವಿಲ್ಲ. ಜಗಳೂರಿನಲ್ಲಿ ಅತಿಹೆಚ್ಚು ದೇವಾಲಯಗಳಿದೆ ಆದ್ರೆ ಬಸ್​ ಸೌಲಭ್ಯವಿಲ್ಲ. ದಾವಣಗೆರೆ- ಜಗಳೂರು ಬಳ್ಳಾರಿಗೆ ನೇರ ಬಸ್​ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ 32ಕ್ಕೂ ಹೆಚ್ಚು ಸಂಘಟನೆ ಸಾಥ್​ ನೀಡಿದವು.

Related Video