
ಮಹಿಳೆಯರನ್ನು ವಂಚಿಸಿದ ದಾದಾಪೀರ್ ಸ್ವಾಮೀಜಿ, ಕಳ್ಳ ಸ್ವಾಮಿ ಅರೆಸ್ಟ್ ಆಗಿದ್ದೇ ರೋಚಕ!
ಸ್ವಾಮೀಜಿ ಸೋಗಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ವಂಚಕ ದಾದಾಪೀರ್ ಸ್ವಾಮಿಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸ್ವಾಮೀಜಿ ಬರೋಬ್ಬರಿ 25 ಲಕ್ಷ ರೂಪಾಯಿ ಬಂಗಾರ ದೋಚಿದ ರೋಚಕ ಕತೆ ಇಲ್ಲಿದೆ.
ದಾವಣಗೆರೆ(ಡಿ.13) ಒಂದಲ್ಲ, ಎರಡಲ್ಲ ಬರೋಬ್ಬರಿ 25 ಲಕ್ಷ ರೂಪಾಯಿ ಬಂಗಾರ ದೋಚಿದ ಕಳ್ಳ ಸ್ವಾಮಿಯ ಕತೆ ಇದು. ಹೆಸರು ದಾದಾಪೀರ್ ಸ್ವಾಮೀಜಿ. ಕಷ್ಟ ಹೇಳಿಕೊಂಡು ಈ ಸ್ವಾಮೀಜಿ ಬಳಿ ಬಂದವರಿಗೆ ಕಷ್ಟಗಳನ್ನು ದೂರ ಮಾಡಿ ಪರಿಹಾರ ಸೂಚಿಸುವ ಸ್ವಾಮೀಜಿ ಅಸಲಿಗೆ ಮಾಡಿದ್ದು ಬಹುದೊಡ್ಡ ವಂಚನೆ. ಯಾರೇ ಬಂದರೂ ಪೂಜೆ ಮಾಡಿಸಿ ಎಲ್ಲವನ್ನೂ ಸರಿ ಮಾಡಿಸುತ್ತೇನೆ ಎಂದು ಪೂಜೆ ವೇಳೆ ಮನೆಯಲ್ಲಿರುವ ಬಂಗಾರ ಇಡುವಂತೆ ಸೂಚಿಸುತ್ತಾನೆ. 21 ದಿನ ಪೂಜೆ ಎಂದು ಹೇಳಿ ಇಟ್ಟಿದ್ದ ಬಂಗಾರ, ದುಡ್ಡು ಸೇರಿದಂತೆ ಎಲ್ಲವನ್ನೂ ದೋಚುತ್ತಿದ್ದ. ಈ ಕಳ್ಳ ಸ್ವಾಮೀಜಿಯ ರೋಚಕ ಕತೆ ಇಲ್ಲಿದೆ.