Asianet Suvarna News Asianet Suvarna News

Today Horoscope: ಇಂದು ಕುಮಾರ ಷಷ್ಠಿ ಇದ್ದು..ಸುಬ್ರಹ್ಮಣ್ಯ ಸ್ವಾಮಿಗೆ ಈ ರೀತಿಯಾಗಿ ಪೂಜೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Feb 15, 2024, 9:56 AM IST | Last Updated Feb 15, 2024, 9:56 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಗುರುವಾರ, ಷಷ್ಠಿ ತಿಥಿ, ಅಶ್ವಿನಿದ ನಕ್ಷತ್ರ.

ಮಾಘ ಮಾಸದ ಷಷ್ಠಿಯನ್ನು ಕುಮಾರ ಷಷ್ಠಿ ಎಂದು ಕರೆಯಲಾಗುತ್ತದೆ. ಇಂದು ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ. ಇದರಿಂದ ಕುಜ ದೋಷ ನಿವಾರಣೆಯಾಗಲಿದೆ. ಅಲ್ಲದೇ ಈತ ವಿದ್ಯೆಗೆ ಅಧಿಪತಿಯಾಗಿದ್ದಾನೆ. ಹಾಗಾಗಿ ಮಕ್ಕಳು ಚೆನ್ನಾಗಿ ಓದುತ್ತಿಲ್ಲವೆಂದರೇ, ಸ್ವಾಮಿಗೆ ಬಾಳೆಹಣ್ಣು, ಜೇನು ತುಪ್ಪವನ್ನು ಸಮರ್ಪಣೆ ಮಾಡಿ. ಸಿಂಹ ರಾಶಿಯವರಿಗೆ ವ್ಯಾಪಾರದಲ್ಲಿ ತೊಡಕು. ದೈವ ಸಹಾಯ ಇರಲಿದೆ. ಧರ್ಮ ಕಾರ್ಯಗಳಲ್ಲಿ ಭಾಗಿ. ಸಜ್ಜನರ ಭೇಟಿ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.

ಇದನ್ನೂ ವೀಕ್ಷಿಸಿ:  Yogi Adityanath: ಎಲ್ಲೆಲ್ಲಿ ಶುರುವಾಗಲಿದೆ ಕಾನೂನು ಕುರುಕ್ಷೇತ್ರ..? ವಿಳಾಸವಿಲ್ಲದ ಯೋಗಿಯ ಪತ್ರ ತಲುಪಿದ್ದೆಲ್ಲಿಗೆ..?