Today Horoscope: 12 ರಾಶಿಗಳ ಭವಿಷ್ಯ ಹೇಗಿದೆ? ಈ ದಿನ ಶಿವಕುಮಾರ ಸ್ವಾಮಿಜೀ ಹುಟ್ಟಿದ ದಿನವಾಗಿದ್ದು, ಅವರ ಸ್ಮರಣೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸೋಮವಾರ, ಸಪ್ತಮಿ ತಿಥಿ, ಮೂಲ ನಕ್ಷತ್ರ. 

ಈ ದಿನ ಉತ್ತಮ ಕಾರ್ಯಗಳಿಗೆ ಸೂಕ್ತವಾಗಿದೆ. ಈ ದಿನ ತುಮಕೂರಿನ ಶಿವಕುಮಾರ ಸ್ವಾಮೀಜಿ ಹುಟ್ಟಿದ ದಿನವಾಗಿದೆ. ಮೂಲ ನಕ್ಷತ್ರ ಇರುವುದರಿಂದ ಸರಸ್ವತಿ ಆರಾಧನೆ ಮಾಡಿ. ವೃಶ್ಚಿಕ ರಾಶಿಯವರಿಗೆ ಅನ್ನ ಸಮೃದ್ಧಿ. ಕುಟುಂಬ ಸೌಖ್ಯ. ವೃತ್ತಿಯಲ್ಲಿ ಅನುಕೂಲ. ಲಾಭದಾಯಕ ದಿನ. ಈಶ್ವರ ಪ್ರಾರ್ಥನೆ ಮಾಡಿ. ಧನಸ್ಸು ರಾಶಿಯವರಿಗೆ ಸೌಖ್ಯದ ದಿನ. ವೃತ್ತಿಯಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.

ಇದನ್ನೂ ವೀಕ್ಷಿಸಿ: ರಾಜಕೀಯಕ್ಕೆ ನಾನು ಹೋಗಲಿಲ್ಲ, ರಾಜಕೀಯ ನನ್ನನ್ನು ಎಳೆದುಕೊಂಡಿದೆ: ಡಾ. ಸಿ ಎನ್‌ ಮಂಜುನಾಥ್

Related Video