Asianet Suvarna News Asianet Suvarna News

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಗೆ ಉರುಳಿದ ಕಾರು: ಇಬ್ಬರು ಬಲಿ

Raichur News: ರಾಯಚೂರಿನಲ್ಲಿ ವರುಣನ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ

ರಾಯಚೂರು (ಆ. 30): ರಾಯಚೂರಿನಲ್ಲಿ ವರುಣನ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ತುಂಗಭದ್ರಾ ಎಡದಂಡೆ ಕಾಲುವೆಗೆ ಪಲ್ಟಿಯಾಗಿದ್ದು, ಇಬ್ಬರು ಸಾವನಪ್ಪಿದ್ದಾರೆ.  ಸ್ಥಳದಲ್ಲೇ ಇಬ್ಬರ ಸಾವುನ್ನಪ್ಪಿದ್ದು ಚಾಲಕ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.  ರಾಯಚೂರು ಜಿಲ್ಲೆ ಮಸ್ಕಿಯ ಮಸ್ಕಿ ನಾಲಾ ಬಳಿ ಘಟನೆ ನಡೆದಿದೆ. ಆಂಧ್ರ ಪಾಸಿಂಗ್ ಮೂಲದ ಇಂಡಿಕಾ ಕಾರು ಪಲ್ಟಿಯಾಗಿದೆ.  ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ

ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ

Video Top Stories