ಮುತ್ತಪ್ಪ ರೈ ಸ್ಕೆಚ್.. ಜೈರಾಜ್‌ಗೆ ಮಚ್ಚು ಬೀಸಿದ ಚಕ್ರೆ!

ಡಾನ್ ಜೈರಾಜನ ತಾಕತ್ತೇನು ಅನ್ನೋದನ್ನ ಸರಿಯಾಗಿ ತಿಳಿದುಕೊಳ್ಳದೇ ಆತನನ್ನ ಕೊಲ್ಲೋ ಮಾತನ್ನಾಡಿಬಿಟ್ಟಿದ್ರು ಮುತ್ತಪ್ಪ ರೈ. ಮುತ್ತಪ್ಪ ರೈ ಸ್ಕೆಚ್‌ನಂತೆ ನಟೋರಿಯಸ್‌ ಡಾನ್‌, ಜೈರಾಜ್‌ಗೆ ಕ್ರಿಸ್ಟೋಫರ್‌ ಚಕ್ರವರ್ತಿ ಅಲಿಯಾಸ್‌ ಚಕ್ರೆ ಮಚ್ಚು ಬೀಸಿದ್ದ
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.29): 80ರ ದಶಕದ ಕೊನೆಯ ಎರಡ್ಮೂರು ವರ್ಷ ಬೆಂಗಳೂರು ಭೂಗತ ಲೋಕದ ಗಲ್ಲಿಗಳಲ್ಲಿ ಅತೀ ದೊಡ್ಡ ರಕ್ತಪಾತಕ್ಕೆ ಸಾಕ್ಷಿಯಾದ ವರ್ಷ. ಅತೀ ಹೆಚ್ಚು ಗ್ಯಾಂಗ್ ವಾರ್‌ಗಳು ಶುರುವಾಗಿದ್ದು ಆವಾಗಲೇ. ಆದರೆ ಅದು ಶುರುವಾಗಿದ್ದು, ಕಾಟನ್‌ಪೇಟೆ ಪುಷ್ಪಾ ಮತ್ತು ರಾಜೇಂದ್ರ ಜೈರಾಜನ ವಿರುದ್ಧ ತೊಡೆ ತಟ್ಟಿದ ದಿನದಿಂದ. ಇತ್ತ ಪುಷ್ಪನ ಟೀಂನಲ್ಲಿ ರಾಜೇಂದ್ರ, ಕಿಟ್ಟಿ, ಚಕ್ರೆ ಬಿಟ್ರೆ ಬೆಳರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರೆ, ಜೈರಾಜ್ ಹಿಂದೆ ಟಫ್ ಫೈಟರ್‌ಗಳ ದಂಡೇ ಇತ್ತು. 

Add Asianetnews Kannada as a Preferred SourcegooglePreferred

ಇನ್ನೂ ಯಾವಾಗ ಜೈರಾಜ್ ಶಿಷ್ಯ ಬಲರಾಮನ ಮೇಲೆ ಚಕ್ರೆ ಮತ್ತು ಆತನ ಸ್ನೇಹಿತರು ಅಟ್ಯಾಕ್ ಮಾಡಿದ್ರೋ, ಜೈರಾಜ್ ಅದರ ರಿವೇಂಜ್‌ಗೆ ನಿಂತುಬಿಟ್ಟ. ಜೇಡರಹಳ್ಳಿ ಕೃಷ್ಣಪ್ಪ ಸೀನ್‌ಗೆ ಎಂಟ್ರಿಯಾಗ್ತಾನೆ. ಇತ್ತ ಜೈರಾಜ್ ಸ್ಕೆಚ್ ಕೇಳಿ ದಂಗಾದ ಪುಷ್ಪಾ ಆ್ಯಂಡ್ ಗ್ಯಾಂಗ್ ಹೋಗಿದ್ದು ಭವಿಷ್ಯದ ಡಾನ್ ಮುತ್ತಪ್ಪ ರೈ ಬಳಿಗೆ. 

ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ!

ಪುತ್ತೂರಿನ ತೋಟದ ಮನೆಯಲ್ಲಿ ಕೂತು ಮುತ್ತಪ್ಪ ರೈ, ರಾಜೆಂದ್ರ ಮತ್ತು ಪಷ್ಪನಿಗೆ ಇದೊಂದು ಪ್ರಶ್ನೆ ಹಾಕಿದ್ರು. ತಿಗಳರ ಪೇಟೆ ಗಲ್ಲಿಗಳಲ್ಲಿ ಗೋಪಿ ಜೈರಾಜ್ನನ್ನ ತಡವಿಕೊಂಡಿದ್ದೇ ಕೊನೆ ಆನಂತರ ಆತನನ್ನ ಮುಟ್ಟೋ ಧೈರ್ಯ ಯಾರಂದ್ರೆ ಯಾರೂ ಮಾಡಿರಲಿಲ್ಲ. ಈಗ ಒಬ್ಬ ಮುತ್ತಪ್ಪ ರೈ ಬೆಂಬಲಕ್ಕಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಪುಷ್ಪಾ ಟೀಮ್‌ ಎದ್ದು ನಿಂತಿತ್ತು. ಮಚ್ಚುಗಳು, ಲಾಂಗ್‌ಗಳು, ಬಾಂಬ್,‌ ಪಿಸ್ತೂಲ್‌ಗಳು, ಒಬ್ಬ ನಿರಾಯುಧನನ್ನ ಕೊಲ್ಲೋದಕ್ಕೆ 20 ಜನ ಶಸ್ತ್ರ ಸಜ್ಜಿತ ಹುಡುಗರು, ಅಷ್ಟೆಲ್ಲಾ ಇದ್ದವರು ಡಾನ್ ಜೈರಾಜ್‌ನನ್ನು ಹೊಡೆದು ಮುಗಿಸಲು ಸಾಧ್ಯವಾಗಲಿಲ್ಲ.

Related Video