Asianet Suvarna News Asianet Suvarna News

ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಕೇಸ್‌: 6 ಕಡೆ ಎನ್‌ಐಎ ದಾಳಿ, ಇಬ್ಬರ ಬಂಧನ

ಶಿವಮೊಗ್ಗದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಕೇಸ್‌ ಆತಂಕ ಹುಟ್ಟಿಸಿದ್ದು, ರಾಜ್ಯದಲ್ಲಿ ಆರು ಕಡೆಗಳಲ್ಲಿ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಸೇರಿದಂತೆ 6 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ. ಈ ವೇಳೆ ಕೇಸ್‌ ಸಂಬಂಧ ಹುಝೇರ್‌ ಬೇಗ್‌ ಹಾಗೂ ಉಡುಪಿ ಮೂಲದ ರಿಹಾನ್‌ ಶೇಕ್‌'ರನ್ನು ವಶಕ್ಕೆ ಪಡೆಯಲಾಗಿದೆ. ರಿಹಾನ್‌ ಶೇಕ್‌ ಮಂಗಳೂರಿನ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು, ಟ್ರಯಲ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಉಡುಪಿಗೂ ಲಿಂಕ್‌ ಇದೆಯಾ ಎಂಬ ಅನುಮಾನ ಮೂಡಿದೆ. ಶಾರೀಕ್‌ ಹಾಗೂ ಮಾಜ್‌ ಮುನೀರ್‌ ಸಂಪರ್ಕ ಹಿನ್ನೆಲೆ ರಿಹಾನ್‌ ಶೇಕ್‌'ನನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರಿನ ಪಿಎ ಕಾಲೇಜಿನಲ್ಲಿ ರಿಹಾನ್‌ ಹಾಗೂ ಮಾಜ್‌ ಮುನೀರ್‌ ಓದುತ್ತಿದ್ದರು. ದಾಳಿ ವೇಳೆ ಡಿಜಿಟಲ್‌ ಡಿವೈಸ್‌ ಅನ್ನು ವಶಕ್ಕೆ ಪಡೆಯಲಾಗಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಐಸಿಸ್‌ ಜೊತೆ ನಂಟು ಹೊಂದಿರುವ ಬಗ್ಗೆಯೂ ಮಾಹಿತಿ ಬಹಿರಂಗವಾಗುತ್ತಿದೆ

Bengaluru: ವಿಚಾರಣೆಗೆ ಕರೆತಂದಿದ್ದ ಆರೋಪಿ ಅನುಮಾನಾಸ್ಪದ ಸಾವು: ಲಾಕಪ್‌ಡೆತ್‌ ಆರೋಪ

Video Top Stories