
ಬೆಂಗಳೂರು: ಬೌನ್ಸ್ನಲ್ಲಿ ಬಂದಿದ್ದವರು 3 ಲಕ್ಷ ರೂ. ದೋಚಿದ್ರು, ಆಮೇಲೆ!
ಬೌನ್ಸ್ ಬೈಕ್ ನಲ್ಲಿ ಬಂದು ಹಣ ದೋಚಿದ ಕಳ್ಳರು/ ಜನರ ಕೈಗೆ ಸಿಕ್ಕಿಬಿದ್ದವನಿಗೆ ಧರ್ಮದೇಟು/ ಬೆಂಗಳೂರಿನ ಪೀಣ್ಯದಲ್ಲಿ ಘಟನೆ
ಬೆಂಗಳೂರು(ಜು. 23) ಅವರು ಬೌನ್ಸ್ ಬೈಕ್ನಲ್ಲಿ ಬಂದಿದ್ದ. ಬಂದಿದ್ದವ 3 ಲಕ್ಷ ರೂ. ದರೋಡೆ ಮಾಡಿದ್ದ. ಮಾಡಿದವ ಜನರ ಕೈಗೂ ಸಿಕ್ಕಿಬಿದ್ದಿದ್ದರು. ಆಮೇಲೆ ಕೇಳಬೇಕೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದುನಿಯಾ ವಿಜಯ್ ಕೈಗೆ ತಲ್ವಾರ್ ಕೊಟ್ಟವರು ಯಾರು?
ಬೆಂಗಳೂರಿನ ಪೀಣ್ಯದ ಎಪಿ ನಗರದಲ್ಲಿ ಘಟನೆ ನಡೆದಿದ್ದು ವ್ಯಕ್ತಿಯೊಬ್ಬರು ಮೂರು ಲಕ್ಷ ಹಣ ಡ್ರಾ ಮಾಡಿ ಸ್ಕೂಟರ್ ನಲ್ಲಿ ಹೊರಟಿದ್ದರು. ಹಣ ಡ್ರಾ ಮಾಡಿದ ವ್ಯಕ್ತಿಯನ್ನು ಬೌನ್ಸ್ ನಲ್ಲಿ ಫಾಲೊ ಮಾಡಿದ ಮೂವರು ಯುವಕರು ಅಡ್ಡಗಡ್ಡಿ ಹಣ ದರೋಡೆ ಮಾಡಿದ್ದರು. ಆದರೆ ಒಬ್ಬ ಕಳ್ಳ ಜನರ ಕೈಗೆ ಸಿಕ್ಕಿಬಿದ್ದಿದ್ದ. ಕಳ್ಳನನ್ನ ಮರಕ್ಕೆ ಕಟ್ಟಿ, ಉಳಿದ ಇಬ್ಬರನ್ನೂ ಸ್ಥಳಕ್ಕೆ ಬರುವಂತೆ ಮಾಡಿದ ಸ್ಥಳೀಯರು ಮೂರು ಲಕ್ಷ ಹಣ ಸಮೇತ ಮೂವರನ್ನ ರಾಜಗೋಪಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.