ಕೆಲಸಕ್ಕೆ ಹೋದವನು ನಾಪತ್ತೆ, ಅವನನ್ನ ಕೊಂದುಬಿಟ್ಟಿದ್ದ ಧಣಿ: 3 ವರ್ಷ ಹೋರಾಡಿದವಳಿಗೆ ಕೊನೆಗೂ ಸಿಗ್ತು ನ್ಯಾಯ!

ಕಾರ್ಪೆಂಟರ್ ಉದ್ಯೋಗಿಯನ್ನು ಹತ್ಯೆ ಮಾಡಿದ ಹಂತಕರಿಗೆ ಕೊನೆಗೂ ಕೋರ್ಟ್ ತಕ್ಕ ಶಿಕ್ಷೆ ವಿಧಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

First Published Oct 25, 2024, 2:49 PM IST | Last Updated Oct 25, 2024, 2:49 PM IST

ಅದೊಂದು ಬಡ ಕುಟುಂಬ. ಗಂಡ ಹೆಂಡತಿ ಮತ್ತು ಒಬ್ಬಳೇ ಮಗಳು. ಗಂಡ ಕಾರ್ಪೆಂಟರ್​​. ಹೆಂಡತಿ ಮನೆಯಲ್ಲೇ ಇರುತ್ತಿದ್ದಳು. ಮಗಳು ಕಾಲೇಜಿಗೆ ಹೋಗ್ತಿದ್ಲು. ಮನೆಯಲ್ಲಿ ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಮಾಡ್ತಿದ್ದ ಕುಟುಂಬ ಅದು. ಆದ್ರೆ ಆವತ್ತೊಂದು ದಿನ ಕೆಲಸಕ್ಕೆ ಅಂತ ಹೋದ ಗಂಡ ಮಿಸ್ಸಿಂಗ್​​ ಆಗಿದ್ದ. ಕೆಲಸ ಮಾಡ್ತಿದ್ದ ಜಾಗಕ್ಕೆ ಹೋಗಿ ಕೇಳಿದ್ರೆ ಒಡೆಯ ನನಗೆ ಗೊತ್ತಿಲ್ಲ ಅಂದಿದ್ದ. ಬಳಿಕ ಎರಡು ದಿನಗಳ ಬಳಿಕ ಗಂಡ ಹೆಣವಾಗಿ ಸಿಕ್ಕಿದ್ದ.

ಇದೇ ಕೇಸ್​​ನ ತನಿಖೆಯನ್ನ ನಡೆಸಿದ್ದ ಪೊಲೀಸರು ತನಿಖೆ ನಡೆಸಿ ಹಂತಕರನ್ನ ಜೈಲಿಗೆ ಕಳಿಸಿದ್ರು. ಆದ್ರೆ ಇವತ್ತು ಇದೇ ಕೇಸ್​​ನ ಕೋರ್ಟ್​ ತೀರ್ಪು ಹೊರಬಿದ್ದಿದೆ. ಆ ಹಂತಕರಿಗೆ ನ್ಯಾಯಾಲಯ ತಕ್ಕ ಶಿಕ್ಷೆ ಕೊಟ್ಟಿದೆ. ಅಷ್ಟಕ್ಕೂ ಆ ಕಾರ್ಪೆಂಟರ್​​ನನ್ನ ಕೊಂದಿದ್ಯಾರು? ಹಂತಕರಿಗೆ ಕೋರ್ಟ್​ ಕೊಟ್ಟ ತೀರ್ಪು ಏನು? 3 ವರ್ಷ ಹಿಂದಿನ ಕೊಲೆ ಕೇಸ್​ನ ಕಂಪ್ಲೀಟ್​​ ಡಿಟೇಲ್ಸ್​​ ಇಲ್ಲಿದೆ ನೋಡಿ

Video Top Stories