ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪ್ಪ: ಮಕ್ಕಳನ್ನ ಕೊಂದು ಪೊಲೀಸರಿಗೆ ತಾಯಿಯೇ ಕಾಲ್​ ಮಾಡಿದ್ಲು..!

ಮಕ್ಕಳನ್ನು ತನಗೆ ಸಾಕೋದಕ್ಕೆ ಆಗೋದಿಲ್ಲ ಅಂದಾಗ, ಮಕ್ಕಳಿಗೆ ಬೇರೆ ದಾರಿ ತೋರಿಸಿ ಆಕೆ ಏಕಾಂಗಿಯಾಗಿ ಬದುಕಬಹುದಿತ್ತು. ಆದ್ರೆ ಹಾಗೆ ಮಾಡದೇ ಹೆತ್ತ ಮಕ್ಕಳನ್ನೇ ಮುಗಿಸಿದ್ದು ನಿಜಕ್ಕೂ ಕ್ಷಮಿಸಲಾರದ ತಪ್ಪು. 

Share this Video
  • FB
  • Linkdin
  • Whatsapp

ಬೆಂಗಳೂರು(ಏ.11): ಅದೊಂದು ಪುಟ್ಟ ಕುಟುಂಬ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಇದ್ದಿದ್ದರಲೇ ನೆಮ್ಮದಿಯಾಗಿ ಜೀವನ ಮಾಡ್ತಿತ್ತು. ಆದ್ರೆ ಆ ಕುಟುಂಬದ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ. ಇವತ್ತು ಇಡೀ ಸಂಸಾರ ಸರ್ವನಾಶವಾಗಿದೆ.. ಅಪ್ಪ ಮಗಳ ಮೇಲೆ ಕಣ್ಣು ಹಾಕಿ ಜೈಲು ಸೇರಿದ್ರೆ ಅಮ್ಮ ಮಕ್ಕಳ ಕಥೆಯನ್ನೇ ಮುಗಿಸಿ ಸೆರೆಮನೆಗೆ ಹೋಗಿದ್ದಾಳೆ. ಉಸಿರು ಕೊಟ್ಟವಳೇ ಉಸಿರು ನಿಲ್ಲಿಸಿಬಿಟ್ಟಿದ್ದಾಳೆ. ಇಡೀ ಬೆಂಗಳೂರನ್ನೇ ಶಾಕ್​ ಆಗುವಂತೆ ಮಾಡಿದ್ದ ಎರಡು ಮಕ್ಕಳ ಡೆಡ್ಲಿ ಮರ್ಡರ್​​ ಮತ್ತು ಆ ಕೊಲೆಯನ್ನ ಮಾಡಿದ ತಾಯಿಯ ಕಥೆಯೇ ಇವತ್ತಿನ ಎಫ್​ಐಆರ್​​.

Add Asianetnews Kannada as a Preferred SourcegooglePreferred

ಹೌದು.. ಹುಟ್ಟಿಸಿದ ಅಪ್ಪನೇ ಮಗಳ ಮೇಲೆ ಕಣ್ಣು ಹಾಕಿದ್ದ. ಇದೇ ಕಾರಣಕ್ಕೆ ಜೈಲು ಸೇರಿದ. ಆದ್ರೆ ಇದ್ದೆಲ್ಲಾ ಆಗಿ ಒಂದು ತಿಂಗಳಾಗಿದೆ. ಇವತ್ತು ತಾಯಿ ಅದೇ ಮಗಳ ಉಸಿರು ನಿಲ್ಲಿಸಿದ್ದಾಳೆ.. ಅಷ್ಟೇ ಅಲ್ಲ ಮಗಳ ಜೊತೆಗೆ ಮಗನನ್ನೂ ಕೊಂದುಬಿಟ್ಟಿದ್ದಾಳೆ.

ಕುರುಬರ ಮಠದಲ್ಲಿ ದಲಿತ ಸ್ವಾಮೀಜಿಯ ಪ್ರತಿಮೆ ಇಟ್ಟಿದ್ದೇ ತಪ್ಪಾಯ್ತಾ?: ಬಳ್ಳಾರಿಯಲ್ಲಿ ಶುರುವಾಯ್ತು ಪ್ರತಿಮೆ ಪಾಲಿಟಿಕ್ಸ್​​..!

ಇಬ್ಬರೂ ದುಡಿದರೂ ಆ ಸಂಸಾರ ಸರಿಯಾಗಿ ಸಾಗ್ತಿರಲಿಲ್ಲ.. ಇಂಥಹ ಟೈಂನಲ್ಲಿ ಗಂಡ ಮಾಡಬಾರದನ್ನ ಮಾಡಿ ಜೈಲು ಸೇರಿಬಿಟ್ಟ. ಇದು ಆ ತಾಯಿಯನ್ನ ಮಾನಸಿಕವಾಗಿ ಕುಗ್ಗಿಸಿಬಿಟ್ಟಿತ್ತು.. ಒಪ್ಪತ್ತು ಊಟಕ್ಕೂ ಕಷ್ಟವಾಗ್ತಿತ್ತು.. ಮಕ್ಕಳು ಹಸಿವಿನಿಂದ ಮಲಗೋದನ್ನ ಆಕೆಯಿಂದ ನೋಡೋಕೆ ಆಗ್ತಿರಲಿಲ್ಲ.. ಒಂದು ತಿಂಗಳು ಅದೇಗೋ ತಡೆದಳು.. ಆದ್ರೆ ನಿನ್ನೆ ಹಬ್ಬದ ದಿನ ಅವಳ ತಲೆಗೆ ಅದೇನು ಬಂತೋ ಏನೋ ಹೆತ್ತ ಮಕ್ಕಳನ್ನೇ ಮುಗಿಸುವ ತೀರ್ಮಾನ ಮಾಡಿದ್ಲು... ಬೆಳಗ್ಗೆ ಹೊಸ ಬಟ್ಟೆ ಕೊಡೆಸಿ, ಹಬ್ಬದ ಊಟ ಬಡಿಸಿ ರಾತ್ರಿ ತನ್ನ ಕೈಯಾರೆ ಮಕ್ಕಳನ್ನ ಕೊಂದುಬಿಟ್ಟಳು ಆ ಪಾಪಿ ತಾಯಿ.

ಮಕ್ಕಳನ್ನು ತನಗೆ ಸಾಕೋದಕ್ಕೆ ಆಗೋದಿಲ್ಲ ಅಂದಾಗ, ಮಕ್ಕಳಿಗೆ ಬೇರೆ ದಾರಿ ತೋರಿಸಿ ಆಕೆ ಏಕಾಂಗಿಯಾಗಿ ಬದುಕಬಹುದಿತ್ತು. ಆದ್ರೆ ಹಾಗೆ ಮಾಡದೇ ಹೆತ್ತ ಮಕ್ಕಳನ್ನೇ ಮುಗಿಸಿದ್ದು ನಿಜಕ್ಕೂ ಕ್ಷಮಿಸಲಾರದ ತಪ್ಪು. 

Related Video