ಮಂಗಳೂರು ಸ್ಫೋಟ ಪ್ರಕರಣ: ಕೊಯಮುತ್ತೂರು ಬ್ಲಾಸ್ಟ್‌ಗೂ ನಂಟು?

ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಕುರಿತು, ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
 

Share this Video
  • FB
  • Linkdin
  • Whatsapp

ಮಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣದ ಆರೋಪಿ ಮೊಹಮದ್‌ ಶಾರೀಕ್‌'ಗೂ ಹಾಗೂ ಕೊಯಮುತ್ತೂರು ಬ್ಲಾಸ್ಟ್‌'ಗೂ ಲಿಂಕ್ ಇದೆಯಾ ಎನ್ನುವ ಶಂಕೆ ಉಂಟಾಗಿದೆ. ಬ್ಲಾಸ್ಟ್‌'ಗೂ ಮುನ್ನ ಶಾರೀಕ್ ತಮಿಳುನಾಡಿಗೆ ಭೇಟಿ ನೀಡಿದ್ದ, ಹಾಗೂ ತಮಿಳುನಾಡಿನ ಶಿಕ್ಷಕನೊಬ್ಬನ ಹೆಸರಿನಲ್ಲಿ ಸಿಮ್‌ ಪಡೆದಿದ್ದ. ಸೆಪ್ಟೆಂಬರ್'ನಲ್ಲಿ ಕೊಯಮುತ್ತೂರಿನ ಸಿಂಗನಲ್ಲೂರಿಗೆ ಶಾರೀಕ್ ಭೇಟಿ ನೀಡಿದ್ದ. ಕಾರು ಬಾಂಬ್‌ ಸ್ಫೋಟಕ್ಕೂ ಮೊದಲೇ ಅಲ್ಲಿಗೆ ಹೋಗಿದ್ದ. ಅ. 23ರಂದು ಸಂಗಮೇಶ್ವರ ದೇವಸ್ಥಾನದ ಎದುರು ಸ್ಫೋಟವಾಗಿ, ಜಗಮೇಶ್ ಮುಬೀನ್‌ ಎಂಬ ಐಸಿಸ್‌ ನಂಟಿದ್ದ ಉಗ್ರ ಸಾವನಪ್ಪಿದ್ದ. ಬೆಂಗಳೂರಲ್ಲಿ ಮೆಕಾನಿಕಲ್‌ ಎಂಜನೀಯರ್‌ ಮುಬೀನ್‌ ನಂಟು ಕೂಡ ಇದ್ದು, ಸಿಂಗನಲ್ಲೂರಿನಲ್ಲೇ ಇದ್ದು ಕೊಂಡೇ ಬಾಂಬ್‌ ಬ್ಲಾಸ್ಟ್‌ಗೆ ಪ್ಲಾನ್‌ ಮಾಡಲಾಗಿತ್ತು. ಸೆಪ್ಟೆಂಬರ್‌'ನಲ್ಲಿ ತೀರ್ಥಳ್ಳಿಯಿಂದ ಪಾರೀಖ್ ನಾಪತ್ತೆಯಾಗಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Chikkamagaluru; ಚಿನ್ನದ ವರ್ತಕನನ್ನ ಬೆದರಿಸಿ ಪೊಲೀಸರಿಂದಲೇ ದರೋಡೆ!

Related Video