Asianet Suvarna News Asianet Suvarna News

ತಳ್ಳಾಟ-ನೂಕಾಟ; ಶಾಸಕ ಸಿದ್ದು ಸವದಿಗೆ ಈಗ ಶುರುವಾಯ್ತು ಅಸಲಿ ಸಂಕಟ

ಪುರಸಭೆ ತಳ್ಳಾಟ-ನೂಕಾಟ ಪ್ರಕರಣ/ ಸಿದ್ದು ಸವದಿಗೆ ಕಂಟಕ/  ಎಲ್ಲ ಇಲಾಖೆಗಳು ಮಾಹಿತಿ ಪಡೆದುಕೊಂಡವು/ ಸ್ಥಳ ಮಹಜರು ಮಾಡಲಾಗಿದೆ/ ಶಾಸಕ ಸಿದ್ದು ಸವದಿ ಸೇರಿದಂತೆ 31 ಜನರ‌ ವಿರುದ್ಧ ಕೇಸ್

ಬಾಗಲಕೋಟೆ (ಜ. 05)  ಮಹಾಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣ ಕೇಸ್ ಸಿದ್ದು ಸವದಿಗೆ ಕಂಟಕ ತರುತ್ತದೆಯಾ ಎಂಬ ಪ್ರಶ್ನೆ ಮತ್ತೆ ಎದುರಾಗಿದೆ. ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ 31 ಜನರ‌ ವಿರುದ್ಧ ಕೇಸ್ ದಾಖಲಾಗಿದೆ.

 ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ಇದೆ. ನವೆಂಬರ್ 9, 2020 ರಂದು ನಡೆದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ವೇಳೆ  ಗಲಾಟೆ ನಡೆದಿತ್ತು.   ಪುರಸಭೆ ಸದಸ್ಯೆ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ಅವರನ್ನು ತಳ್ಳಾಡಿ ನೂಕಾಡಿದ ಪ್ರಕರಣದ ಸಮಗ್ರ ಮಾಹಿತಿಯನ್ನು ವಿವಿಧ ಇಲಾಖೆ ಅಧಿಕಾರಿಗಳು ಪಡೆದುಕೊಂಡಿದ್ದಾರೆ. 

 

Video Top Stories